ಸೂರ್ಲು ತೋಡಿಗೆ ಮಲಿನ ಜಲ ಹರಿಯಬಿಟ್ಟ ಸಂಸ್ಥೆಗೆ ದಂಡ : ವಿವಿಧ ಕಡೆ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ನಿಂದ ತಪಾಸಣೆ
ಕಾಸರಗೋಡು: ಸೂರ್ಲು ತೋಡಿಗೆ ಉಪಯೋಗಶೂನ್ಯ ಜಲವನ್ನು ಹರಿಯಬಿಟ್ಟು ಮಲಿನಗೊಳಿಸಲಾಗಿದೆ ಎಂಬ ದೂರಿನಂತೆ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್ಫೋರ್ಸ್ ಮೆಂಟ್ ಸ್ಕ್ವಾಡ್ ನಡೆಸಿದ ಪರಿಶೀಲನೆ ಯಲ್ಲಿ ಹೊಸ ಬಸ್ ನಿಲ್ದಾಣ ಸಮೀಪದ ಕಾಂಪ್ಲೆಕ್ಸ್ನ ಹೋಟೆಲ್ನಿಂದ ಉಪ ಯೋಗಶೂನ್ಯ ಜಲವನ್ನು ಪ್ರತ್ಯೇಕ ವ್ಯವಸ್ಥೆ ಮೂಲಕ ಸಾರ್ವಜನಿಕ ಚರಂಡಿಗೆ ಹರಿಯ ಬಿಟ್ಟಿರುವುದನ್ನು ಪತ್ತೆಹಚ್ಚಲಾಯಿತು. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲಕನಿಗೆ 10,000 ರೂ. ದಂಡ ಹೇರಲಾಯಿತು. ಕಾಂಪ್ಲೆಕ್ಸ್ಗೆ ಬೇಕಾಗಿ ಸಿದ್ಧಪಡಿಸಿದ ಸೋಕ್ಪಿಟ್ಗೆ ಉಪಯೋಗಶೂನ್ಯ ಜಲವನ್ನು ಹರಿಸಲು ನಿರ್ದೇಶ ನೀಡಲಾ ಯಿತು. ಕಾಂಪ್ಲೆಕ್ಸ್ನಿಂದಿರುವ ಮಲಿನ ಜಲವನ್ನು ಕೂಡಾ ಇದೇ ಚರಂಡಿಗೆ ಹರಿಯಬಿಟ್ಟಿರುವುದಕ್ಕೆ ಈ ಹಿಂದಿನ ತಪಾಸಣೆಯಲ್ಲಿ ಕಾಂಪ್ಲೆಕ್ಸ್ ಮಾಲಕನಿಗೆ 25,000 ರೂ. ದಂಡ ವಿಧಿಸಲಾಗಿತ್ತು. ಬಳಿಕದ ತಪಾಸಣೆಯಲ್ಲಿ ನಗರಸಭಾ ಬಸ್ಸ್ಟಾಂಡ್ಗೆ ಹೊಂದಿಕೊಂಡಿರುವ ವಿವಿಧ ಹೋಟೆಲ್, ಜ್ಯೂಸ್ ಅಂಗಡಿ, ಟಿಫಿನ್ ಸ್ಟಾಲ್ಗಳಾದ ಐದು ಅಂಗಡಿ ಗಳಿಂದ ಮಲಿನ ಜಲವನ್ನು ಚರಂಡಿಗೆ ಹರಿಯಬಿಟ್ಟಿರುವುದನ್ನು ಪತ್ತೆಹಚ್ಚಲಾಗಿದ್ದು, 5000 ರೂ.ನಂತೆ ಇವರಿಂದ ದಂಡ ವಸೂಲು ಮಾಡಲಾಗಿದೆ. ನಗರಸಭಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲು ನಿರ್ದೇಶಿಸ ಲಾಗಿದೆ. ಅಂಗಡಿಗಳಿಂದ, ಸಂಸ್ಥೆಗಳಿಂದ ಸಾರ್ವಜನಿಕ ಚರಂಡಿಗೆ ಮಲಿನ ಜಲ ಹರಿಯಬಿಡುವುದು ಪರಿಸರವಾಸಿಗಳ ಆರೋಗ್ಯ ಸಮಸ್ಯೆಗೆ, ಜಲಮೂಲಗಳನ್ನು ಮಲಿನಗೊಳಿಸಲು ಕಾರಣವಾಗುತ್ತಿದೆ. ಹೊಸ ಬಸ್ ನಿಲ್ದಾಣದ ಬಡಗು ಭಾಗದ ಲ್ಲಿರುವ ಚರಂಡಿಗಳ ಮೂಲಕ ಹರಿಯುವ ನೀರು ಸೂರ್ಲು ತೋಡಿಗೆ ತಲುಪುತ್ತಿದೆ.
ವಿದ್ಯಾನಗರದ ರೆಸ್ಟೋರೆಂಟ್ ಒಂದರ ಉಪಯೋಗಶೂನ್ಯ ಜಲವನ್ನು ಸೋಕ್ಫಿಟ್ ತುಂಬಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಬೇಕಾಗಿ ಹೊಸತಾಗಿ ನಿರ್ಮಿಸಿದ ಚರಂಡಿಗೆ ಹರಿಯಬಿಟ್ಟಿರುವುದನ್ನು ಪತ್ತೆಹಚ್ಚ ಲಾಗಿದ್ದು, ಇದಕ್ಕಾಗಿ ಮಾಲಕನಿಗೆ ೭,೫೦೦ ರೂ. ದಂಡ ಹೇರಲಾಗಿದೆ. ಅಪಾರ್ಟ್ ಮೆಂಟ್ಗಳಿಂದ ಪ್ಲಾಸ್ಟಿಕ್ ಸಹಿತದ ತ್ಯಾಜ್ಯಗಳನ್ನು ರಾಶಿ ಹಾಕಿ ಉರಿಸುತ್ತಿದ್ದು, ಜೈವಿಕ ತ್ಯಾಜ್ಯ ಸಂಸ್ಕರಣೆಗೆ ವ್ಯವಸ್ಥೆ ಮಾಡದಿರುವುದಕ್ಕಾಗಿ ಮಧೂರು ಪಂಚಾಯತ್ನ ಅಪಾರ್ಟ್ಮೆಂಟ್, ಕಫೆ ಎಂಬೀ ಸಂಸ್ಥೆಯ ಮಾಲಕರಿಗೆ ೫೦೦೦ ರೂ.ನಂತೆ ದಂಡ ಹೇರಲಾಯಿತು. ಈ ಬಗ್ಗೆ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ನ ಮುಖಂಡ ಕೆ.ವಿ. ಮೊಹಮ್ಮದ್ ಮದನಿ, ಹೆಲ್ತ್ ಇನ್ಸ್ಪೆಕ್ಟರ್ ಶೀನ ಎನ್, ಕ್ಲರ್ಕ್ ಅಶೋಕ್ ಕುಮಾರ್, ಫಾಸಿಲ್ ಇ.ಕೆ. ಎಂಬಿವರು ತಪಾಸಣೆ ನಡೆಸಿದರು.