ಹಳಿ ದುರಸ್ತಿ: ರೈಲ್ವೇ ಗೇಟ್ ಮುಚ್ಚುಗಡೆಯಿಂದ ಸಂಚಾರ ಸಮಸ್ಯೆ
ಮಂಜೇಶ್ವರ: ಹಳಿ ದುರಸ್ತಿ ಹಿನ್ನೆಲೆಯಲ್ಲಿ ಮಂಜೇಶ್ವರ ರೈಲ್ವೇ ಗೇಟ್ ಮುಚ್ಚುಗಡೆಗೊಳಿಸಿ ದುದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ತಿಂಗಳ 18ರಿಂದ ಗೇಟ್ ಬಳಿ ಹಳಿ ದುರಸ್ತಿಗೊಳಿಸಲು ಆರಂಭಿಸಲಾಗಿದ್ದು, 27ರ ತನಕ ಕಾಮಗಾರಿ ಮುಂದುವ ರಿಯಲಿದೆ ಎಂದು ತಿಳಿಸಲಾಗಿದೆ.
ಇದರಿಂದಾಗಿ ಈ ದಾರಿಯಾಗಿ ತಲಪಾಡಿಗೆ ತೆರಳುವ ಬಸ್ಗಳು ಮಂಜೇಶ್ವರ ರೈಲ್ವೇ ನಿಲ್ದಾಣ ತನಕ ಸಂಚರಿಸುತ್ತಿವೆ. ಈ ಕಾರಣದಿಂದಾಗಿ ಮಂಜೇಶ್ವರ ಒಳ ಭಾಗದ ಜನರು ತಲಪಾಡಿ, ಉದ್ಯಾವರ ಸಹಿತ ವಿವಿಧ ಕಡೆಗಳಿಗೆ ವಾಹನದಲ್ಲಿ ತೆರಳುವವರು ಹೊಸಂಗಡಿ ಮೂಲಕ ಸುತ್ತುಬಳಸಿ ಸಂಚರಿಸಬೇಕಾಗುತ್ತಿದೆ. ಈ ಗೇಟನ್ನು ಈ ಮೊದಲು ಕೂಡಾ ದುರಸ್ತಿ ನಡೆಸಲಾಗಿತ್ತು. ಪದೇ ಪದೇ ಗೇಟ್ ಬಳಿ ದುರಸ್ತಿ ನಡೆಸುತ್ತಿರುವುದ ರಿಂದಾಗಿ ಗೇಟು ಮುಚ್ಚಬೇಕಾಗಿ ಬರುತ್ತಿದ್ದು, ಇದು ಸ್ಥಳೀಯರಿಗೆ ಸಮಸ್ಯೆ ಉಂಟುಮಾಡುತ್ತಿದೆ.