ಹಿಂದೂ ಜಾಗೃತ ಸಮಾವೇಶಕ್ಕೆ ದೈಗೋಳಿ ಶ್ರೀ ರಾಮಕೃಷ್ಣ ಮಂದಿರದಲ್ಲಿ ಸಿದ್ಧತಾ ಸಭೆ ಇಂದು
ವರ್ಕಾಡಿ: ಕಾಶ್ಮೀರದ ಹುತಾತ್ಮರಿಗೆ ನುಡಿನಮನ ಕಾರ್ಯಕ್ರಮ ಹಾಗೂ ವಿರಾಟ್ ಹಿಂದೂ ಜಾಗೃತ ಸಮಾವೇಶ ಮೇ 4ರಂದು ಸಂಜೆ 4 ಗಂಟೆಗೆ ಐಲ ಮೈದಾನದಲ್ಲಿ ನಡೆಯಲಿದ್ದು, ಇದರ ಯಶಸ್ವಿಗೆ ವರ್ಕಾಡಿ ಪಂಚಾಯತ್ ಗೊಳಪಟ್ಟ ದೇವಸ್ಥಾನ, ಭಜನಾ ಮಂದಿರ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಸಭೆ ಇಂದು ಸಂಜೆ 6.30ಕ್ಕೆ ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ನಡೆಯಲಿದೆ. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಮಾರ್ಗದಶನ ನೀಡುವರು.