ಇಂದು ಸಂಜೆ ಡಿವೈಎಫ್‌ಐ ಮಾನವ ಸರಪಳಿ

ಕಾಸರಗೋಡು: ಕೇಂದ್ರ ಸರಕಾರದ ವಿರುದ್ಧ ಡಿವೈಎಫ್‌ಐ ನಡೆಸುವ ಮಾನವ ಸರಪಳಿ ಇಂದು ಸಂಜೆ ೫ ಗಂಟೆಗೆ ನಡೆಯಲಿದೆ. ಕಾಸರಗೋಡು ರೈಲು ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ತಿರುವನಂತಪುರ ರಾಜ್‌ಭವನ್ ತನಕ ಮಾನವ ಸರಪಳಿ ಮುಂದುವರಿಯಲಿದೆ. ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ ಎ.ಎ. ರಹೀಂ ಈ ಮಾನವ ಸರಪಳಿಯ ಮೊದಲ ಕೊಂಡಿಯಾಗಿ ಕಾಸರ ಗೋಡಿನಲ್ಲಿ ಭಾಗವಹಿಸಲಿದ್ದಾರೆ. ಸಿಪಿಎಂ ಮತ್ತು ಡಿವೈಎಫ್‌ಐ ಸೇರಿದಂತೆ ಇತರ ಹಲವು ನೇತಾರರು ಇದರ ಕೊಂಡಿಗಳಾ ಗಿರುವರು. ಕಾಸರಗೋಡು ಜಿಲ್ಲೆಯಲ್ಲಿ ಮಾತ್ರವಾಗಿ ಒಂದು ಲಕ್ಷದಷ್ಟು ಕಾರ್ಯಕರ್ತರು ಇದರ ಕೊಂಡಿಗಳಾಗಲಿರುವರು ಎಂದು ಡಿವೈಎಫ್‌ಐ ನೇತಾರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page