ಉಪ್ಪಳ: ಬಿಎಂಎಸ್ ಯೂನಿಟ್ ಸಮ್ಮೇಳನ

ಉಪ್ಪಳ: ತಲೆಹೊರೆ ಕಾರ್ಮಿಕ ಸಂಘ (ಬಿಎಂಎಸ್) ಇದರ ಉಪ್ಪಳ ಯೂನಿಟ್ ಸಮ್ಮೇಳನ ಯೂನಿಟ್ ಕಚೇರಿಯಲ್ಲಿ ಜರಗಿತು. ಯೂನಿಟ್ ಅಧ್ಯಕ್ಷ ಮೋಹನದಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಯೂನಿಯನ್ ಜಿಲ್ಲಾ ಪ್ರಧಾನ ಸೆಕ್ರೆಟರಿ ಹರೀಶ್ ಕುದ್ರೆಪ್ಪಾಡಿ ಉದ್ಘಾಟಿಸಿದರು.  ಜಿಲ್ಲಾ ಕೋಶಾಧಿಕಾರಿ ದಿಲೀಪ್ ಕುದ್ರೆಪ್ಪಾಡಿ, ಪಂಚಾಯತ್ ಸಮಿತಿ ಅಧ್ಯಕ್ಷ ಕಮಲಾಕ್ಷ ಐಲ, ವಲಯ ಕೋಶಾಧಿಕಾರಿ ಐತ್ತಪ್ಪ ನಾರಾಯಣಮಂಗಲ ಚರ್ಚೆಗೆ ನೇತೃತ್ವ ನೀಡಿದರು. ಜಿಲ್ಲಾ ಜತೆ ಕಾರ್ಯದರ್ಶಿ ದಿನೇಶ್ ಪಿ. ಸಮಾರೋಪ ಭಾಷಣ ನಡೆಸಿದರು. ಯೂನಿಟ್ ಕಾರ್ಯದರ್ಶಿ ಸಂಜೀವ ವಾರ್ಷಿಕ ವರದಿ ಮಂಡಿಸಿದರು. ಯೂನಿಟ್ ಕೋಶಾಧಿಕಾರಿ  ರಂಜನ್ ವಾರ್ಷಿಕ ಲೆಕ್ಕ ಮಂಡಿಸಿದರು. ಪಂಚಾಯತ್ ಕಾರ್ಯದರ್ಶಿ ಸೂರ್ಯನಾರಾಯಣ ನಿರೂಪಿಸಿದರು. ರಾಜೇಶ್ ಎಂ ಸ್ವಾಗತಿಸಿ, ಮಲ್ಲೇಶ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page