ಊಟಮಾಡಿ ಬರುವಷ್ಟರಲ್ಲಿ ಹೋಟೆಲ್ ಬಳಿಯಿಂದ ಸ್ಕೂಟರ್ ಕಳವು
ಉಪ್ಪಳ: ಹೋಟೆಲ್ನ ಹೊರಗೆ ಸ್ಕೂಟರ್ ನಿಲ್ಲಿಸಿ ವ್ಯಕ್ತಿ ಊಟಮಾಡಿ ಬರುವಷ್ಟರಲ್ಲಿ ಸ್ಕೂಟರ್ ಕಳವುಗೀ ಡಾದ ಘಟನೆ ನಡೆದಿದೆ. ಆನೆಕಲ್ಲು ನಿವಾಸಿ ಮೊಹಮ್ಮದ್ ಎಂಬವರ ಸ್ಕೂಟರ್ ಕಳವಿಗೀಡಾ ಗಿದ್ದು, ಈ ಬಗ್ಗೆ ಅವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖ ಲಿಸಿ ತನಿಖೆ ನಡೆಸುತ್ತಿದ್ದಾರೆ. ಮೊಹ ಮ್ಮದ್ ಈ ತಿಂಗಳ ೧ರಂದು ಮಧ್ಯಾಹ್ನ 2.30ಕ್ಕೆ ಹೊಸಂಗಡಿ ಪೇಟೆಯ ಹೋಟೆಲ್ವೊಂದರ ಮುಂಭಾಗ ಸ್ಕೂಟರ್ ನಿಲ್ಲಿಸಿ ಊಟ ಮಾಡಲು ತೆರಳಿದ್ದರು. ಊಟ ಮಾಡಿ ಮರಳು ವಷ್ಟರಲ್ಲಿ ಸ್ಕೂಟರ್ ನಾಪತ್ತೆಯಾಗಿದೆ ಯೆಂದು ದೂರಿನಲ್ಲಿ ತಿಳಿಸಲಾಗಿದೆ.