ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಕಾರಡ್ಕ ಶಾಲೆಯಲ್ಲಿ: ಸ್ವಾಗತ ಸಮಿತಿ ರೂಪೀಕರಣ

ಮುಳ್ಳೇರಿಯ: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ದ. ೫ರಿಂದ ೯ರ ತನಕ ಕಾರಡ್ಕ ಜಿ.ವಿ.ಎಚ್.ಎಸ್.ಎಸ್.ನಲ್ಲಿ ನಡೆಯಲಿದೆ. ೨೧ ವರ್ಷದ ಬಳಿಕ ಶಾಲೆಯಲ್ಲಿ ನಡೆಯುವ ಜಿಲ್ಲಾ ಶಾಲಾ ಕಲೋತ್ಸವದ ಯಶಸ್ವಿಗಾಗಿ ಸ್ವಾಗತ ಸಮಿತಿ ರೂಪೀಕರಿಸಲಾಯಿತು. ಸಭೆಯನ್ನು ಜಿಲ್ಲಾ ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಕಾರಡ್ಕ ಬ್ಲೋಕ್ ಪಂ. ಅಧ್ಯಕ್ಷ ಸಿಜಿ ಮ್ಯಾಥ್ಯು ಅಧ್ಯಕ್ಷತೆ ವಹಿಸಿದರು.

ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಕೆಎಂ ಅಶ್ರಫ್, ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್, ಎಂ. ರಾಜ ಗೋಪಾಲನ್, ಜಿ. ಪಂ. ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇಂಬಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ, ಬ್ಲೋಕ್ ಪಂ. ಅಧ್ಯಕ್ಷ ಸಿಜಿ ಮ್ಯಾಥ್ಯು, ರಕ್ಷಾಧಿಕಾರಿಗಳಾಗಿರುವ ಸ್ವಾಗತ ಸಮಿತಿ ರೂಪೀಕರಿಸಲಾಗಿದೆ. ಇದರಲ್ಲಿ ಎನ್.ಎ. ನೆಲ್ಲಿಕುನ್ನು ಸ್ವಾಗತಸಮಿತಿ ಅಧ್ಯಕ್ಷ, ಪಿ. ಬೇಬಿ ಬಾಲಕೃಷ್ಣನ್ ವರ್ಕಿಂಗ್ ಚಯರ್‌ಮ್ಯಾನ್ ಹಾಗೂ ಡಿ.ಡಿ.ಇ. ನಂದಿಕೇಶನ್ ಜನರಲ್ ಕನ್ವೀನರ್ ಆಗಿ ಆಯ್ಕೆ ಮಾಡಲಾಗಿದೆ. ಎಸ್‌ಎನ್. ಸರಿತ ವೈಸ್ ಚೆಯರ್‌ಮ್ಯಾನ್, ಉದಯ ಕುಮಾರಿ, ಮಣಿಕಂಠನ್, ರಘುರಾಂ ಭಟ್, ಕೆ. ನಾರಾಯಣ ದೇಲಂಪಾಡಿ, ಮುಖ್ಯೋಪಾಧ್ಯಾಯ ಎಂ. ಸಂಜೀವ, ಪ್ರಾಂಶುಪಾಲೆ ಮೀರಾ ಜೋಸ್ ಜೋಯಿಂಟ್ ಕನ್ವೀನರ್‌ಗಳಾಗಿ ಆಯ್ಕೆಯಾಗಿದ್ದು, ಡಿಡಿಇ ದಿನೇಶ್ ಕೋಶಾಧಿಕಾರಿಯಾಗಿ ದ್ದಾರೆ. ಇತರ ೧೫ ಉಪ ಸಮಿತಿಗಳನ್ನು ಕೂಡಾ ರೂಪೀಕರಿಸಲಾಗಿದೆ.

ಕಾರಡ್ಕ ಪಂ. ಅಧ್ಯಕ್ಷ ಗೋಪಾಲಕೃಷ್ಣ ಭಟ್, ಜಿ. ಪಂ. ಸದಸ್ಯ ಶಫೀಖ್, ಸಿ.ಜೆ. ಸಜಿತ್ ಭಾಗವಹಿಸಿದರು. ಮುಖ್ಯೋಪಾಧ್ಯಾಯ ಎಂ. ಸಂಜೀವ ಸ್ವಾಗತಿಸಿ, ಸ್ಟಾಫ್ ಸೆಕ್ರೆಟರಿ ಎಂ. ಪದ್ಮಕುಮಾರ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page