ಕೀಯೂರಿನಲ್ಲಿ ಬಿರುಸಿನ ಗಾಳಿಗೆ ಅಪಾರ ನಾಶನಷ್ಟ

ಕಾಸರಗೋಡು: ನಿನ್ನೆ ರಾತ್ರಿ 11 ಗಂಟೆಗೆ ಬೀಸಿದ ಬಿರುಸಿನ ಗಾಳಿಗೆ ಕೀಯೂರಿನಲ್ಲಿ ಅಪಾರ ನಾಶನಷ್ಟ ಸಂಭವಿಸಿದೆ. ೮ರಷ್ಟು ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಅದರಲ್ಲಿ ಒಂದು ಕಂಬ ಕಾರಿನ ಮೇಲೆ ಬಿದ್ದು ಕಾರು ಹಾನಿಯಾಗಿದೆ. ಕವಿ ಕರುಣನ್ ಎಂಬವರ ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಆದರೆ ಯಾರಿಗೂ ಅಪಾಯ ಉಂಟಾಗಿಲ್ಲ. ಇದೇ ವೇಳೆ 11 ಗಂಟೆಗೆ ಕೀಯೂರು ಹಾಗೂ ಪರಿಸರದಲ್ಲಿ ಕತ್ತಲೆ ಆವರಿಸಿರುವುದು ಸ್ಥಳೀಯರಲ್ಲಿ ಭೀತಿಗೆ ಕಾರಣವಾಯಿತು.

Leave a Reply

Your email address will not be published. Required fields are marked *

You cannot copy content of this page