ಕ್ರೀಡೆಗೂ ತಟ್ಟಿದ ಪಾಕಿಸ್ತಾನದ ಭಯೋತ್ಪಾದನೆ ಕಾವು:  ಏಷ್ಯಾ ಕಪ್ ಟೂರ್ನಿಯಿಂದ ಹಿಂದೆ ಸರಿದ ಭಾರತ

ನವದೆಹಲಿ: ಪಾಕಿಸ್ತಾನ ನಡೆಸುತ್ತಿ ರುವ  ಭಯೋತ್ಪಾದನೆಯ  ಕಾವು ಇದೀಗ ಕ್ರೀಡೆಗೂ ತಟ್ಟಿದೆ. ಪಾಕಿಸ್ತಾನ ಪ್ರಾಯೋಜಕತ್ವದ ಭಯೋತ್ಪಾದನೆ ಉಭಯ ದೇಶಗಳ  ನಡುವಿನ  ಬಾಂಧವ್ಯ ಇನ್ನಷ್ಟು ಬಿಗಡಾಯಿಸುತ್ತಿ ರುವಂತೆ ಇನ್ನೊಂದೆಡೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನಡೆಸುವ ಎಲ್ಲಾ ಟೂರ್ನಿಗಳಿಂದ ಸದ್ಯ ದೂರವಿರಲು ನಿರ್ಧರಿಸಿದೆ. ಹೀಗಾಗಿ ಈ ವರ್ಷ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ  ಕಣಕ್ಕಿಳಿಯದಿರುವ ತೀರ್ಮಾನವನ್ನು ಬಿಸಿಸಿಐ ಕೈಗೊಂಡಿದೆ.

ಇದೇ ರೀತಿ ಮುಂದಿನ ತಿಂಗಳಿಂದ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಟೂರ್ನಿ ನಡೆಯಲಿದ್ದು, ಆ ಟೂರ್ನಿಗೂ ತಮ್ಮ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ. ಹಾಗೆ   ಪುರುಷರ ಏಷ್ಯಾ ಕಪ್ ಟೂರ್ನಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧಸಿದಿದ್ದು, ಆ ಟೂರ್ನಿಯಿಂದಲೂ ಭಾರತ ಹೊರಗುಳಿಯುವುದಾಗಿ ಬಿಸಿಸಿಐ ತಿಳಿಸಿದೆ.  ಈ ಬಾರಿಯ ವಿಶ್ವಕಪ್ ಟೂರ್ನಿ ಭಾರತದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರ ಆತಿಥ್ಯವನ್ನೂ ಭಾರತವೇ ಹೊಂದಿತ್ತು. ಅದರಿಂದಲೂ ಭಾರತ ಈಗ ಹಿಂದಕ್ಕೆ ಸರಿದಿದೆ. ಹೀಗಾಗಿ ಟೂರ್ನಿ ನಡೆಯುವ ಸಾಧ್ಯತೆ ಇಲ್ಲ ಎನ್ನಬಹುದಾಗಿದೆ.

ಏಷ್ಯಾ ಕಪ್ ಟೂರ್ನಿಗೆ ಅತೀ ಹೆಚ್ಚು ಪ್ರಾಯೋಜಕತ್ವ ಸಿಗುವುದು ಭಾರತದಿಂದ ಮಾತ್ರವೇ ಆಗಿದೆ. ಇದೀಗ ಟೀಂ ಇಂಡಿಯಾ ಟೂರ್ನಿ ಯಿಂದ ಹಿಂದಕ್ಕೆ ಸರಿದಿರುವುದರಿಂದಾಗಿ ಪ್ರಾಯೋಜಕರ ಕೊರತೆಯೂ ಎದುರಾ ಗಲಿದೆ. ಅದು ಆದಾಯದ ಮೇಲೆ ತೀವ್ರ ಹೊಡೆತ ನೀಡಲಿದೆಯೆಂಬುವುದು ನಿಸ್ಸಂಶಯ. ಮಾತ್ರವಲ್ಲ ಟೂರ್ನಿ ನಡೆದಿದ್ದರೂ ಅಚ್ಚರಪಡಬೇಕಾಗಿಲ್ಲ.

ಇತ್ತೀಚೆಗೆ ಪಾಕ್ ಬೆಂಬಲಿತ ಉಗ್ರರು  ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ೨೬ ಭಾರತೀಯರನ್ನು ಹತ್ಯೆಗೈದುದಕ್ಕೆ ಪ್ರತೀಕಾರವಾಗಿ ಭಾರತ ಸೇನೆ ಆಪರೇಶನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ಸೂಕ್ತ ತಿರುಗೇಟು ನೀಡಿತ್ತು.  ಅದಾಗಿಯೂ ಪಾಕ್ ಸರಕಾರ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಮುಂದಾಗಿಲ್ಲ. ಹೀಗಾಗಿ ಪಾಕ್ ಜೊತೆಗಿನ ಎಲ್ಲಾ ರೀತಿಯ ಕ್ರಿಕೆಟ್ ಸಂಬಂಧಗಳಿಗೆ ಇತಿಶ್ರೀ ಹಾಡಲು ಡಿಸಿಸಿಐ ಈಗ ಮುಂದಾಗಿದೆ. ಪಾಕಿಸ್ತಾನ ಸಚಿವರು ಮುಖ್ಯಸ್ಥರಾಗಿರುವ ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸುವ ಪಂದ್ಯಾವಳಿಗಳಲ್ಲಿ ಭಾರತ ತಂಡ ಆಡುವುದಿಲ್ಲ ಮಾತ್ರವಲ್ಲ ಮಹಿಳಾ ಉದಯೋನ್ಮುಖ ಏಷ್ಯಾ ಕಪ್ ನಿಂದಲೂ ಹಿಂದಕ್ಕೆ ಸರಿಯುವ ವಿಷಯದ ಬಗ್ಗೆ ನಾವು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಈಗಾಗಲೇ ಮೌಕಿಕವಾಗಿ ತಿಳಿಸಿದ್ದೇವೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page