ಕ್ವಾರ್ಟರ್ಸ್ ಬಳಿ ನಿಲ್ಲಿಸಿದ್ದ ಬೈಕ್, ಸ್ಕೂಟರ್ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕ್ವಾರ್ಟರ್ಸ್ ಬಳಿ ನಿಲ್ಲಿಸಿದ್ದ ಬೈಕ್ ಹಾಗೂ ಸ್ಕೂಟರ್ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಿದ್ಯಾನಗರ ಸಮೀಪದ ನ್ಯೂ ಕೋಪಾ ನೈಫ್ ರಸ್ತೆಯಲ್ಲಿರುವ ಕ್ವಾರ್ಟರ್ಸ್‌ನ  ಮುಂದೆ ನಿಲ್ಲಿಸಿದ್ದ ಈ ಎರಡು ವಾಹನ ನಿನ್ನೆ  ಬೆಳಿಗ್ಗೆ ೫ ಗಂಟೆ ವೇಳೆ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈಬಗ್ಗೆ ನ್ಯೂ ಕೋಪಾದ ನೂರುದ್ದೀನ್ ಎಂಬವರು ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಎರಡು ದ್ವಿಚಕ್ರ ವಾಹನಗಳು ದೂರುಗಾರರಾದ ನೂರುದ್ದೀನ್‌ರ ಮಕ್ಕಳು ಚಲಾಯಿಸುವ ವಾಹನಗಳಾಗಿವೆ. 70,೦೦೦ ರೂ.ಗಳ ನಷ್ಟ ಉಂಟಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಂಕಿಗಾಹುತಿಯಾದ ಎರಡು ವಾಹನಗಳನ್ನು ಪೊಲೀಸರು ನಂತರ ಅಲ್ಲಿಂದ ವಿದ್ಯಾನಗರ ಪೊಲೀಸ್ ಠಾಣೆಗೆ ಸಾಗಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page