ಚಿಕಿತ್ಸೆಯಲ್ಲಿದ್ದ ಯುವಕ ನಿಧನ

ಪೆರ್ಲ: ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯ ಲ್ಲಿದ್ದ ಯುವಕ ಮೃತಪ ಟ್ಟರು. ಮಣಿಯಂಪಾರೆ ಶೇಣಿ ಶಾಲೆ ಬಳಿ ನಿವಾಸಿ ಮಾರ್ಸೆಲ್ ಡಿ’ಸೋಜಾರ ಪುತ್ರ ಲವೀನಾ ಪ್ರಸಾದ್ (೩೮) ನಿಧನರಾದರು. ಇವರು ಗುಜರಾತ್‌ನಲ್ಲಿ ಹೋ ಟೆಲ್ ಮೆನೇಜರ್ ಆಗಿದ್ದರು. ಒಂದು ತಿಂಗಳ ಹಿಂದೆ ಅಸೌಖ್ಯ ಹಿನ್ನೆಲೆಯಲ್ಲಿ ಊರಿಗೆ ತಲುಪಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇವರ ತಾಯಿ ಈ ಹಿಂದೆ ನಿಧನರಾಗಿದ್ದಾರೆ. ಅವಿವಾಹಿತರಾದ ಮೃತರು ತಂದೆ, ಸಹೋದರ ಸುಜಿತ್ ಕುಮಾರ್, ಸಹೋದರಿಯರಾದ ಜ್ಯೋತಿ, ಉಷಾಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page