ಜಿಲ್ಲಾ ಹೆಚ್ಚುವರಿ ಎಸ್‌ಪಿಯಾಗಿ ಬಾಲಕೃಷ್ಣನ್ ನಾಯರ್

ಕಾಸರಗೋಡು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಬೇರೆಡೆಗೆ ವರ್ಗಾ ಯಿಸಲ್ಪಟ್ಟ ಪೊಲೀಸ್ ಇನ್ಸ್ ಪೆಕ್ಟರ್‌ಗಳನ್ನು ಮತ್ತೆ ಕಾಸರಗೋಡು ಜಿಲ್ಲೆಗೆ ವರ್ಗಾ ಯಿಸಲಾಗಿದೆ. ಇದರ ಹೊರತಾಗಿ ಇಬ್ಬರು ಇನ್ಸ್‌ಪೆಕ್ಟರ್‌ಗಳಿಗೆ ಉದ್ಯೋಗದಲ್ಲಿ ಭಡ್ತಿ ನೀಡಿ ಡಿವೈಎಸ್‌ಪಿಯಾಗಿ ನೇಮಿಸ ಲಾಗಿದೆ. ಮಾತ್ರವಲ್ಲ ಡಿವೈಎಸ್‌ಪಿ ಪಿ. ಬಾಲಕೃಷ್ಣನ್ ನಾಯರ್‌ಗೆ ಉದ್ಯೋಗದಲ್ಲಿ ಭಡ್ತಿ ನೀಡಿ ಅವರನ್ನು ಕಾಸರಗೋಡು ಹೆಚ್ಚುವರಿ ಎಸ್‌ಪಿಯನ್ನಾಗಿ ನೇಮಿಸಲಾಗಿದೆ.

ಇನ್ಸ್‌ಪೆಕ್ಟರ್‌ಗಳಾದ ಎಸ್. ಚಂದ್ರಕುಮಾರ್‌ರಿಗೆ ಉದ್ಯೋಗ ದಲ್ಲಿ ಭಡ್ತಿ ನೀಡಿ ಕಾಸರಗೋಡು ನರ್ಕೋಟಿಕ್ ಸೆಲ್ ಡಿವೈಎಸ್‌ಪಿ ಯಾಗಿಯೂ ಟಿ. ಉತ್ತಮ್‌ದಾಸ್ ರಿಗೆ ಉದ್ಯೋಗದಲ್ಲಿ ಭಡ್ತಿ ನೀಡಿ ಕ್ರೈಂಬ್ರಾಂಚ್ ಡಿವೈಎಸ್‌ಪಿಯಾಗಿ ಭಡ್ತಿ ನೀಡಲಾಗಿದೆ. ಕಾಸರಗೋಡು ಡಿವೈಎಸ್‌ಪಿ ಆಗಿ ಸಿ.ಕೆ. ಸುನಿಲ್ ಕುಮಾರ್, ಹೊಸದುರ್ಗ- ಡಿವೈಎಸ್‌ಪಿ ಯಾಗಿ ಬಾಬು ಪೆರಿಂಙೋತ್ ಮತ್ತು ಬೇಕಲ ಡಿವೈಎಸ್‌ಪಿಯಾಗಿ ವಿ. ಮನೋಜ್‌ರನ್ನು ನೇಮಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page