ಟ್ರಾನ್ಸ್‌ಫಾರ್ಮರ್‌ನ ಮೇಲೆ ಬಿದ್ದ ಮರದ ರೆಂಬೆ: ನಾಲ್ಕು ವಿದ್ಯುತ್ ಕಂಬಗಳು ನಾಶ

ಸೀತಾಂಗೋಳಿ: ಕಟ್ಟತ್ತಡ್ಕದಲ್ಲಿ ಆಲದ ಮರದ ರೆಂಬೆ ತುಂಡಾಗಿ ಟ್ರಾನ್ಸ್‌ಫಾರ್ಮರ್‌ನ ಮೇಲೆ ಬಿದ್ದಿದ್ದು ಇದರಿಂದ ನಾಲ್ಕು ವಿದ್ಯುತ್ ಕಂಬಗಳು ನಾಶಗೊಂಡಿವೆ.

ಇದರಿಂದ ಈ ವ್ಯಾಪ್ತಿಯಲ್ಲಿ ವಿದ್ಯುತ್ ಅಡಚಣೆ ಎದುರಾಯಿತು. ಮೊನ್ನೆ ಸುರಿದ ಭಾರೀ ಮಳೆ ಹಾಗೂ ಗಾಳಿ ವೇಳೆ ಈ ಘಟನೆ ನಡೆದಿದೆ. ರಾತ್ರಿ ಹೊತ್ತಿನಲ್ಲಿ ಇದು ಸಂಭವಿಸಿರುವುದರಿಂದ ಭಾರೀ ಅಪಾಯ ತಪ್ಪಿಹೋಗಿದೆ.

ಟ್ರಾನ್ಸ್‌ಫಾರ್ಮರ್‌ನತ್ತ ಬಾಗಿ ನಿಂತ ಮರದ ರೆಂಬೆಗಳನ್ನು ಕಡಿದು ತೆರವುಗೊಳಿಸಬೇಕೆಂದು ನಾಗರಿಕರು ಹಲವು ಬಾರಿ ಕೆಎಸ್‌ಇಬಿ ಅಧಿಕಾರಿಗಳಲ್ಲಿ ತಿಳಿಸಿದ್ದರ ಅದಕ್ಕೆ ಕ್ರಮ ಉಂಟಾಗಿಲ್ಲವೆಂದು ನಾಗರಿಕರು ಆರೋಪಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page