ತಾಯಿಯನ್ನು ಕೊಂದು ಮಾಂಸ ಭಕ್ಷಿಸಿದ ನರಭೋಜಿಗೆ ಗಲ್ಲು ಶಿಕ್ಷೆ

ಮುಂಬಯಿ: ತಾಯಿಯನ್ನು ಕೊಂದು ದೇಹದ ಭಾಗಗಳನ್ನು ಅಡುಗೆ ಮಾಡಿ ಸೇವಿಸಿದ ಪ್ರಕರಣದ ಆರೋಪಿಗೆ ಕೌಲಲಾಂಪೂರ್ ನ್ಯಾಯಾಲಯ ನೀಡಿದ ಗಲ್ಲುಶಿಕ್ಷೆಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಸಮಾಜದ ಮನಃಸಾಕ್ಷಿಯನ್ನು ಹಿಡಿದು ಅಲುಗಾಡಿಸಿದ ನರಭೋಜಿ ಪ್ರಕರಣ ಇದಾಗಿದೆ ಎಂದು ನ್ಯಾಯಾಧೀಶರಾದ ರೇವತಿ ಮೋಹಿತೆ ದೇರೆ, ಪೃಥ್ವಿರಾಜ್ ಚೌಹಾಣ್ ಎಂಬಿವರು ಸೇರಿದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ. ಆರೋಪಿ ತಾಯಿಯನ್ನು ಕೊಂದದ್ದು ಮಾತ್ರವಲ್ಲದೆ, ಅವರ ಮೆದುಳು, ಹೃದಯ, ಕರುಳು, ಮೂತ್ರಕೋಶ ಸಹಿತ ಎಲ್ಲವನ್ನೂ ತೆರವುಗೊಳಿಸಿ ಅಡುಗೆ ಮಾಡಿದ್ದನೆಂದು, ಇದು ನರಭೋಜಿ ಪ್ರಕರಣವಾಗಿದ್ದು, ಅಪೂರ್ವಗಳಲ್ಲಿ ಅಪೂರ್ವವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆರೋಪಿಗೆ ಜೀವನಪರ್ಯಂತ ಶಿಕ್ಷೆ ನೀಡಿದರೆ ಆತ ಜೈಲಿನಲ್ಲೂ ಇದೇ ರೀತಿಯ ಆರೋಪವನ್ನು ಮಾಡಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ಗಲ್ಲುಶಿಕ್ಷೆಯನ್ನು ಎತ್ತಿ ಹಿಡಿಯಲಾಗಿದೆ.

2017 ಆಗಸ್ಟ್ 28ರಂದು 63 ವರ್ಷದ ತಾಯಿಯನ್ನು ಯುವಕ ಅತೀ ಕ್ರೂರವಾಗಿ ಕೊಲೆಗೈದಿದ್ದನು. ಮುಂಬಯಿಯಿಂದ 400 ಕಿಲೋ ಮೀಟರ್ ದೂರದ ಕೌಲಲಾಂಪೂರ್‌ನ ಮನೆಯಲ್ಲಿ ಈ ಘಟನೆ ನಡೆದಿದೆ.

You cannot copy contents of this page