ತಿರುವನಂತಪುರದಲ್ಲಿ ಮೃತಪಟ್ಟ ಬಂಬ್ರಾಣ ನಿವಾಸಿಯ ಮೃತದೇಹ ಅಂತ್ಯ ಸಂಸ್ಕಾರ

ಕುಂಬಳೆ: ತಿರುವನಂತಪುರದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ  ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟ ಯುವಕನ ಮೃತದೇಹವನ್ನು ಊರಿಗೆ ತಲುಪಿಸಿ ಹಲವರ ಅಂತಿಮ ನಮನದ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು.

ಬಂಬ್ರಾಣ ಅಂಡಿತ್ತಡ್ಕದ ದಿ| ಪಳ್ಳಿಕುಂಞಿಯವರ ಪುತ್ರ ಅಪ್ಸಲ್ (೨೭)ರ ಮೃತದೇಹವನ್ನು ಇಂದು ಬೆಳಿಗ್ಗೆ ೬.೩೦ರ ವೇಳೆ ಬಂಬ್ರಾಣ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಎರಡು ದಿನಗಳ ಹಿಂದೆ ಅಪ್ಸಲ್ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದರು. ಪ್ರಾಥಮಿಕ ತಪಾಸಣೆಯಲ್ಲಿ ಗಂಭೀರ ಗಾಯವಿಲ್ಲವೆಂದು ತಿಳಿಸಿ ಆಸ್ಪತ್ರೆಯಿಂದ ಕಳುಹಿಸಲಾಗಿತ್ತು. ಆದರೆ ಮೊನ್ನೆ ಸಂಜೆ ವೇಳೆ ವಾಸಸ್ಥಳದಲ್ಲಿ ಕುಸಿದು ಬಿದ್ದ ಅಪ್ಸಲ್‌ರನ್ನು ತಿರುವನಂತಪುರದ  ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಮುಂಜಾನೆ ವೇಳೆ ನಿಧನ ಸಂಭವಿಸಿತ್ತು. ಆಂತರಿಕ ಅವಯವಗಳಿಗೆ ಗಂಭೀರ ಗಾಯವಾ ಗಿರುವುದು ಸಾವಿಗೆ ಕಾರಣವಾಗಿ ರಬಹುದೆಂದು ಸಂಶಯಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕವೇ ಈ ಬಗ್ಗೆ ದೃಢೀಕರಿಸಬಹುದಾಗಿದೆ. ತಿರುವ ನಂತಪುರದ ಜವುಳಿ ಅಂಗಡಿಯಲ್ಲಿ ನೌಕರನಾಗಿದ್ದ ಅಪ್ಸಲ್ ೧೦ ದಿನಗಳ ಹಿಂದೆ  ಸಹೋದರನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿ ಕೆಲಸ ಸ್ಥಳಕ್ಕೆ ತೆರಳಿದ್ದರು.

Leave a Reply

Your email address will not be published. Required fields are marked *

You cannot copy content of this page