ತುರ್ತು ಪರಿಸ್ಥಿತಿ ಘೋಷಣೆಗೆ ಇಂದು 50 ವರ್ಷ: ದೇಶಾದ್ಯಂತ ಸಂವಿಧಾನ ಹತ್ಯಾ ದಿವಸ್ ಆಚರಣೆ
ಕಾಸರಗೋಡು: ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯವೆಂದೇ ಕರೆಯಲಾಗುತ್ತಿರುವ ತುರ್ತು ಪರಿಸ್ಥಿತಿಯ ಘೋಷಣೆಗೆ ಇಂದು ೫೦ ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಇಂದು ದೇಶವ್ಯಾಪಿಯಾಗಿ ಸಂವಿಧಾನ ಹತ್ಯಾ ದಿವನವನ್ನಾಗಿ ಆಚರಿಸುತ್ತಿದೆ. ಇದರ ಪ್ರಯುಕ್ತ ಒಂದು ವರ್ಷವಿಡೀ ತುರ್ತು ಪರಿಸ್ಥಿತಿಯಲ್ಲಿದ್ದ ಪ್ರಜಾಪ್ರಭುತ್ವ ಧ್ವಂಸನಕ್ಕೆ ಸಂಬಂಧಿಸಿ ಹಲವು ಕಾರ್ಯಕ್ರಮಗಳಿಗೂ ಇಂದು ಚಾಲನೆ ನೀಡಲಾಯಿತು.
1975ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಪತನಗೊಳ್ಳುತ್ತಿದ್ದಂತೆಯೇ ಅಂದು ಪ್ರಧಾನಿಯಾಗಿದ್ದ ಇಂದಿರಾಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದರು.1977ರಲ್ಲಿ ಜನತಾ ಪಕ್ಷ ಅಭೂತಪೂರ್ವ ಜಯಸಾಧಿಸುವುದರೊಂದಿಗೆ ತುರ್ತು ಪರಿಸ್ಥಿತಿಯನ್ನು ತೆರವುಗೊಳಿಸಲಾಗಿತ್ತು. ಸಂವಿಧಾನದ ಹತ್ಯಾ ದಿವಸವಾದ ಇಂದು ಅದನ್ನು ಭವ್ಯ ಕಾರ್ಯಕ್ರಮಗಳೊಂದಿಗೆ ಆಯೋಜಿಸುವಂತೆ ಕೇಂದ್ರ ಸಂಸ್ಕೃತಿ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಇದರಂತೆ ಪ್ರಜಾಪ್ರಭುತ್ವದ ಸ್ಫೂರ್ತಿ ಯನ್ನು ಪ್ರತಿಬಿಂಬಿಸುವ ದೀಪಾ ಶಿಖಾ ಯಾತ್ರೆಗೆ ದಿಲ್ಲಿಯಲ್ಲಿ ಇಂದು ಚಾಲನೆ ನೀಡಲಾಯಿತು. ಈ ಯಾತ್ರೆಯು ಒಂದು ವರ್ಷದ ಕಾಲ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ, 2026 ಮಾರ್ಚ್ 21ರಂದು ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ನಾಗರಿಕರ ಹಕ್ಕುಗಳ ನಿರ್ಬಂಧ, ಮಾಧ್ಯಮಗಳ ಕಾರ್ಯ ನಿರ್ವಹಣೆ ಮೇಲೆ ಕಡಿವಾಣ, ವಿರೋಧ ಪಕ್ಷ ನಾಯಕರು ಸಾಮೂ ಹಿಕವಾಗಿ ಸೆರೆಮನೆವಾಸ ಅನುಭವಿಸ ಬೇಕಾಗಿರುವುದು ಸೇರಿದಂತೆ ಪ್ರಜಾ ಪ್ರಭುತ್ವ ನಾಶದ ಹಲವು ಘಟನೆಗಳ ಬಗ್ಗೆ ಪ್ರಚಾರ ಮಾಡಲಾಗುವುದು. ಜತೆಗೆ ಸಂವಿಧಾನ ಹತ್ಯೆ ದಿನ ಎಂಬ ಶೀರ್ಷಿಕೆಯ ಕಿರು ಚಿತ್ರವನ್ನು ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯದ ವೆಬ್ಸೈಟ್ನಲ್ಲಿ ಪ್ರದರ್ಶಿಸಲಾಗುವುದು.
ಇನ್ನೊಂದೆಡೆ 1975ರ ತುರ್ತು ಪರಿಸ್ಥಿತಿ ೫೦ನೇ ವರ್ಷವನ್ನು ಪ್ರಜಾಪ್ರಭುತ್ವದ ಸಂರಕ್ಷಣಾ ಹೋರಾಟ ಸ್ಮರಣ ಸಮಿತಿಯ ಆಶ್ರಯದಲ್ಲಿ ಕಾಸರ ಗೋಡಿನಲ್ಲಿ ಇಂದು ಸ್ಮೃತಿ ಸಂಗಮ ಕಾರ್ಯಕ್ರಮ ನಡೆಸಲಾಯಿತು. ಪ್ರಜಾಪ್ರಭುತ್ವವನ್ನು ಕಾರಾಗೃಹದಲ್ಲಿರಿಸಿ ಸಂವಿಧಾನವನ್ನು ಬುಡಮೇಲುಮಾಡಿ, ಮಾನವ ಹಕ್ಕುಗಳನ್ನು ಉಸಿರುಗಟ್ಟಿಸಿದ ಕಿರಾತಕ ಆಡಳಿತದ ವಿರುದ್ಧ ನಡೆಸಲಾದ ಹೋರಾಟಗಳನ್ನು ಮತ್ತೆ ನೆನಪಿಸಲು ಈ ಸ್ಮೃತಿ ಸಂಗಮ ಕಾರ್ಯಕ್ರಮ ನಡೆಸಲಾ ಗುತ್ತಿದೆ ಯೆಂದು ಹೋರಾಟ ಸ್ಮರಣಾ ಸಮಿತಿಯ ಪದಾಧಿಕಾರಿಗಳು ತಿಳಿಸಿ ದ್ದಾರೆ. ಕಾಸರಗೋಡು ಮುನಿಸಿಪಲ್ ಟೌನ್ ಹಾಲ್ನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡ ಸ್ಮೃತಿ ಸಂಗಮ ಕಾರ್ಯಕ್ರಮವನ್ನು ಗೋವಾ ರಾಜ್ಯಪಾಲ ನ್ಯಾಯವಾಧಿ ಪಿ.ಎಸ್. ಶ್ರೀಧರನ್ ಪಿಳ್ಳೆ ಉದ್ಘಾಟಿಸಿದರು. ಕೇರಳ ಸರಕಾರದ ನಿವೃತ್ತ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಸಂಸ್ಕೃತಿ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ದಿನೇಶ್ ಕಾಮತ್ ಮುಖ್ಯ ಭಾಷಣ ಮಾಡಿ ದರು. ವಿ. ರವೀಂದ್ರನ್, ನ್ಯಾಯ ವಾದಿ ಕರುಣಾಕರನ್ ನಂಬ್ಯಾರ್ ಸೇರಿದಂತೆ ಹಲವರು ಮಾತನಾಡಿದರು.