ದೇಲಂಪಾಡಿ ನಿವಾಸಿ ಪಯ್ಯನ್ನೂರಿನಲ್ಲಿ ನೇಣು ಬಿಗಿದು ಸಾವು
ಮುಳ್ಳೇರಿಯ: ದೇಲಂಪಾಡಿ ಬಳಿಯ ನಿವಾಸಿ ಯುವಕನೋರ್ವ ಪಯ್ಯನ್ನೂ ರಿನಲ್ಲಿ ನೇಣು ಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ದೇಲಂಪಾಡಿ ಉರ್ದು ಚೇಡಿಮೂಲೆ ನಿವಾಸಿ ಆರ್. ಧನಂಜಯನ್ (20) ಮೃತಪಟ್ಟ ವ್ಯಕ್ತಿ. ಈತ ಪಯ್ಯನ್ನೂರು ಮಾಗ್ನಂಮಾಲ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಪಯ್ಯನ್ನೂರು ಕೇಳೋತ್ನ ಕ್ವಾರ್ಟರ್ಸ್ನಲ್ಲಿ ಈ ತಿಂಗಳ 26ರಂದು ರಾತ್ರಿ ಈತ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ದಿ|ರವೀಂ ದ್ರನ್-ಶ್ರೀಮತಿ ದಂಪತಿಯ ಪುತ್ರನಾದ ಮೃತರು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ