ನಗರದ ರಸ್ತೆಗಳನ್ನು ದುರಸ್ತಿಗೊಳಿಸಲು ಒತ್ತಾಯಿಸಿ ಆಟೋ ಚಾಲಕರಿಂದ ಅಧಿಕಾರಿಗಳಿಗೆ ಮನವಿ

ಕಾಸರಗೋಡು: ನಗರದಲ್ಲಿ ಹಾನಿಗೀಡಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ಬಿಎಂಎಸ್ ನೇತೃತ್ವದಲ್ಲಿ ಆಟೋ ಚಾಲಕರು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹೊಂಡಗಳಿಂದ ತುಂಬಿಕೊಂಡಿರುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಎದುರಾಗುತ್ತಿದೆ. ಪ್ರತಿದಿನ ಸಂಗ್ರಹವಾಗುವ ಬಾಡಿಗೆ ಮೊತ್ತವನ್ನು ವಾಹನಗಳ ದುರಸ್ತಿಗೆ ಉಪಯೋಗಿಸಬೇಕಾದ ಸ್ಥಿತಿ ಉಂಟಾಗಿದೆ. ಹಲವಾರು ಬಾರಿ ನಗರಸಭಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅಲ್ಲದೆ ಚಳವಳಿ ಕೂಡಾ ನಡೆಸಲಾಗಿತ್ತು. ಆದರೆ ಆ ವೇಳೆ ಅಧಿಕಾರಿಗಳು ನೀಡಿದ ಭರವಸೆಯನ್ನು ಇದುವರೆಗೆ ಪಾಲಿಸಿಲ್ಲ. ರಸ್ತೆಯ ದುರಸ್ತಿಗೆ ಇನ್ನೂ ಕೂಡಾ ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಚಳವಳಿಗೆ ಮುಂದಾಗುವುದಾಗಿ ಆಟೋರಿಕ್ಷಾ ಚಾಲಕರು ಮುನ್ನೆಚ್ಚರಿಕೆ ನೀಡಿದ್ದಾರೆ.

ಬಿಎಂಎಸ್ ಆಟೋ ಚಾಲಕರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ  ಕೆ.ವಿ. ಬಾಬು, ಜತೆ ಕಾರ್ಯದರ್ಶಿ ಗಳಾದ ದಿನೇಶ್ ಬಂಬ್ರಾಣ, ಗುರುದಾಸ್ ಚೇನಕ್ಕೋಡು, ವಲಯ ಕಾರ್ಯದರ್ಶಿ ರಿಜೇಶ್ ಜೆ.ಪಿ.ನಗರ, ನಗರಸಭಾ ಸಮಿತಿ ಕಾರ್ಯದರ್ಶಿ ಮನೋಜ್, ಎ. ಕೇಶವ, ವಿಶ್ವನಾಥ ಶೆಟ್ಟಿ, ಎಸ್.ಕೆ. ಉಮೇಶ್ ಮೊದಲಾದವರು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.

Leave a Reply

Your email address will not be published. Required fields are marked *

You cannot copy content of this page