ನವಕೇರಳ ವೇದಿಕೆ: ಸ್ವಾಗತ ಸಮಿತಿ ರೂಪೀಕರಣ

ಬದಿಯಡ್ಕ: ನವಂಬರ್ ೧೯ರಂದು ನಡೆಯಲಿರುವ ಕಾಸರಗೋಡು ವಿಧಾನಸಭಾ ಕ್ಷೇತ್ರದ ನವಕೇರಳ ವೇದಿಕೆಯ ಪಂಚಾಯತ್ ಮಟ್ಟದ ಸ್ವಾಗತ ಸಮಿತಿ ಸಭೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಜರಗಿತು. ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಜಿ ಮ್ಯಾಥ್ಯೂ ಉದ್ಘಾಟಿಸಿದರು. ಬದಿಯಡ್ಕ ಪಂಚಾ ಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ರವಿ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕ ಅಜಿತ್ ಕುಮಾರ್, ಎಇಒ ಶಶಿಧರ, ಚಯರ್‌ಪರ್ಸನ್ ರಶೀದಾ ಹಮೀದ್, ಸದಸ್ಯೆ ಜ್ಯೋತಿ, ಪ್ರಕಾಶ್ ಅಮ್ಮಣ  ರೈ ಮಾತನಾಡಿದರು. ರವಿ ರೈ ಅಧ್ಯಕ್ಷರಾಗಿ, ಪಂಚಾಯತ್ ಸೆಕ್ರೆಟರಿ ರಾಜೇಂದ್ರ ಸಂ ಚಾಲಕರಾಗಿ ಸಮಿತಿ ರಚಿಸಲಾಯಿತು. ಜ್ಯೋತಿ, ರಶೀದಾ , ಹಮೀದ್, ಅಮ್ಮಣ್ಣ ರೈ, ಸುಧಾಕರನ್, ಅನಿತಾ ಕ್ರಾಸ್ತಾ, ರಾಜೇಶ್, ಶಮ್ನಿಶಾ, ಶಶಿಧರ ಎಂಬಿವರನ್ನು ಪದಾಧಿ ಕಾರಿಗಳಾಗಿ ನಿರ್ಧರಿಸಲಾಯಿತು. ಬದಿಯಡ್ಕ ಪಂಚಾಯತ್ ಕಾರ್ಯ ದರ್ಶಿ ಸಿ. ರಾಜೇಂದ್ರನ್ ಸ್ವಾಗತಿಸಿ, ಐಸಿಡಿಎಸ್‌ನ ಶಮ್ನಿಶಾ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page