ನಿವೃತ್ತ ಸೈನಿಕ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ

ಹೊಸದುರ್ಗ: ನಿವೃತ್ತ ಸೈನಿಕ ನೀಲೇಶ್ವರ ರೈಲ್ವೇ ಸ್ಟೇಷನ್‌ನ ಮುಂಭಾಗದಲ್ಲಿ ರೈಲು ಗಾಡಿ ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪುದುಕೈ ಚೇಡಿ ರಸ್ತೆ ಶ್ರೀನಿಲಯದ ಉಣ್ಣಿರಾಜ್ (65) ಮೃತಪಟ್ಟವರು. ನಿನ್ನೆ ಸಂಜೆ 5 ಗಂಟೆಗೆ ಘಟನೆ ನಡೆದಿದೆ. ಉಣ್ಣಿರಾಜ್ ಸೈನ್ಯದಿಂದ ನಿವೃತ್ತರಾಗಿ ಕೆಎಸ್‌ಆರ್‌ಟಿಸಿ ಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿದ್ದರು. ನೀಲೇಶ್ವರ ಎಸ್‌ಐ ವಿಷ್ಣು ಪ್ರಸಾದ್‌ರ ನೇತೃತ್ವದಲ್ಲಿ ಮೃತದೇಹದ ಮಹಜರು ನಡೆಸಲಾಗಿದೆ.

ಮೃತರು ಪತ್ನಿ ಗಿರಿಜ, ಮಕ್ಕಳಾದ ವಿಷ್ಣು, ಶ್ರೀಲಕ್ಷ್ಮಿ, ಸಹೋದರರಾದ ನಾರಾಯಣನ್, ಕುಂಞಿಕಣ್ಣನ್, ಸಹೋದರಿ ಕಮಲಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page