ಪುತ್ರನಿಂದ ಕೊಲೆಗೀಡಾದ ಹಿಲ್ಡಾ ಮೊಂತೇರೊ ಮೃತದೇಹದ ಅಂತ್ಯ ಸಂಸ್ಕಾರ
ಮಂಜೇಶ್ವರ: ಪುತ್ರನಿಂದಲೇ ದಾರುಣವಾಗಿ ಕೊಲೆಗೀಡಾದ ವರ್ಕಾಡಿ ನಲ್ಲೆಂಗಿ ನಿವಾಸಿ ಹಿಲ್ಡಾ ಮೊಂತೇರೊ (60)ರ ಮೃತದೇಹದ ಅಂತ್ಯ ಸಂಸ್ಕಾರ ನಿನ್ನೆ ಜರಗಿತು. ಕೊಲ್ಲಿಯಿಂದ ಇನ್ನೋರ್ವ ಪುತ್ರ ಆಲ್ವಿನ್ ಮೊಂತೇರೊ ನಿನ್ನೆ ಬೆಳಿಗ್ಗೆ ಆಗಮಿಸಿದ್ದು, ಅಪರಾಹ್ನ 3 ಗಂಟೆಗೆ ವರ್ಕಾಡಿ ಸೇಕ್ರೆಡ್ ಹಾರ್ಟ್ಆಫ್ ಜೀಸಸ್ ಚರ್ಚ್ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ರೆ| ಫಾ. ಬೇಸಿಲ್ವಾಸ್ ಧಾರ್ಮಿಕ ಕಾರ್ಯಗಳಿಗೆ ನೇತೃತ್ವ ನೀಡಿದರು. ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ, ಹರ್ಷಾದ್ ವರ್ಕಾಡಿ, ಅಬ್ದುಲ್ ಅಸೀಸ್ ಮರಿಕೆ, ಮೊಹಮ್ಮದ್ ಮಜಾಲ್, ಪುರುಷೋತ್ತಮ ಅರಿಬೈಲು, ದಾಮೋದರ ಮಾಸ್ತರ್, ರೋನಿ ಡಿಸೋಜ, ಎಸ್. ಅಬ್ದುಲ್ ಖಾದರ್ ಹಾಜಿ, ಡಿ. ಬೂಬ, ಮೊಹಮ್ಮದ್ ಹನೀಫ್ ಎಚ್.ಎ, ಅಬ್ದುಲ್ ಮಜೀದ್ ಬಿ.ಎ, ವಿನೋದ್ ಕುಮಾರ್, ಶ್ರೀವತ್ಸಾ ಭಟ್, ರಾಜೇಶ್ ಡಿಸೋಜಾ, ಗಾಡ್ವಿನ್, ರಾಬಿಯಾ, ಅಬುಸಾಲಿ ಉಪಸ್ಥಿತರಿದ್ದರು.