ಬಾಲಕನ ಮೇಲೆ ಹಲ್ಲೆ: ಮೂವರ ವಿರುದ್ಧ ಕೇಸು

ಕಾಸರಗೋಡು: ಪೂರ್ವದ್ವೇಷದ ನಿಮಿತ್ತ 15ರ ಹರೆಯದ ಬಾಲಕನನ್ನು ತಡೆದು ನಿಲ್ಲಿಸಿ ಆತನ ಮೇಲೆ ಹಲ್ಲೆ ನಡೆಸಿದ ದೂರಿನಂತೆ ಮೂವರ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇಳಿ ಎಚ್‌ಎನ್‌ಸಿ ಆಸ್ಪತ್ರೆ  ಬಳಿಯ ಅಜೇಶ್ (23), ವಿಜೇಶ್ (20) ಮತ್ತು ಅರಮಂಙಾನ ಉಲೂಚಿಯ ಎಂ.ಎಂ. ಸಜಿತ್ (22) ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಕಳೆದ ಸೋಮವಾರದಂದು ಬೆಳಿಗ್ಗೆ ಕಿಯೂರು ಅಯ್ಯಪ್ಪ ಭಜನಾ ಮಂದಿರದ ಬಳಿ ಮೂವರು ತನ್ನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿ ಪೊಲೀಸರು ನೀಡಿದ ದೂರಿನಲ್ಲಿ ಬಾಲಕ ಆರೋಪಿಸಿದ್ದಾನೆ.

You cannot copy contents of this page