ಬಿ.ಎಂ.ಎಸ್‌ನಿಂದ ಡಂಗುರ ಜಾಥಾ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ ಬಿಎಂಎಸ್‌ನ ೨೦ನೇ ರಾಜ್ಯ ಸಮ್ಮೇಳನ ಪಾಲಕ್ಕಾಡ್‌ನಲ್ಲಿ ಇಂದಿನಿಂದ ೧೧ರವರೆಗೆ ನಡೆಯಲಿದ್ದು, ಇದರ ಪ್ರಚಾರಾರ್ಥ ಕಾಸರಗೋಡು, ಮಧೂರು ವಲಯದ ಕಾರ್ಮಿಕರು ಡಂಗುರ ಜಾಥಾ ನಡೆಸಿದರು. ಕಾಸರಗೋಡು ಬಿಎಂಎಸ್ ಕಚೇರಿ ಪರಿಸರದಿಂದ ಆರಂಭಗೊಂಡ ಜಾಥಾಕ್ಕೆ ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ, ಉಪಾಧ್ಯಕ್ಷ ಮುರಳೀಧರನ್, ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ, ಮಧೂರು ವಲಯ ಅಧ್ಯಕ್ಷ ಮನೀಶ್, ಕಾರ್ಯದರ್ಶಿ ಗುರುದಾಸ್,  ಕಾಸರಗೋಡು ವಲಯ ಕಾರ್ಯದರ್ಶಿ ರಿಜೇಶ್ ಜೆಪಿನಗರ್, ನಗರಸಭಾ ಸಮಿತಿ ಅಧ್ಯಕ್ಷ ಕಮಲಾಕ್ಷ ತಾಳಿಪಡ್ಪು, ಕಾರ್ಯದರ್ಶಿ ಶಿವನ್ ತಾಳಿಪಡ್ಪು, ಬಾಬುಮೋನ್ ಚೆಂಗಳ, ವೀಣಾ ನೆಲ್ಲಿಕುನ್ನು, ಶಾಂತಕುಮಾರಿ ಜೆಪಿನಗರ, ಭವ್ಯ ಮಧೂರು, ವಿಶ್ವನಾಥ ಶೆಟ್ಟಿ, ಎಸ್.ಕೆ. ಉಮೇಶ್, ಕುಂಞಿಕಣ್ಣನ್. ಮನೋಹರನ್ ನೆಲ್ಲಿಕುಂಜೆ ಮೊದಲಾದವರು ನೇತೃತ್ವ ನೀಡಿದರು.

Leave a Reply

Your email address will not be published. Required fields are marked *

You cannot copy content of this page