ಬೆಂಕಿ ಅನಾಹುತ : ಮನೆ ಭಸ್ಮ

ಕಾಸರಗೋಡು: ನಗರದ ತಳಂಗರೆ ಪಡಿಞ್ಞಾರ್‌ನ ಮೊಯ್ದು ಎಂಬವರ ಹೆಂಚು ಹಾಸಿದ ಮನೆಗೆ ರಾತ್ರಿ ಬೆಂಕಿ ತಗಲಿ ಮನೆಯೊಳಗಿನ ಎಲ್ಲಾ ಸಾಮಗ್ರಿಗಳ ಸಹಿತ ಸಂಪೂರ್ಣವಾಗಿ ಭಸ್ಮಗೊಂಡಿದೆ. ಬೆಂಕಿ ತಗಲಿದ ವೇಳೆ ಮನೆಯವರು ತಕ್ಷಣ ಹೊರಗೆ ಓಡಿ ಪ್ರಾಣಾಪಾ ಯದಿಂದ ಪಾರಾಗಿದ್ದಾರೆ.  ವಿಷಯ ತಿಳಿದ ಕಾಸರಗೋಡು ಅಗ್ನಿಶಾಮ ಕದಳ ತಕ್ಷಣ ಸ್ಥಳಕ್ಕಾಗಮಿಸಿ ಊರವರು ಮತ್ತು ಪೊಲೀಸರ ಸಹಾಯದಿಂದ ಬೆಂಕಿ ನಂದಿಸಿದರು. ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಬೆಂಕಿ ತಗಲಿರುವುದಾಗಿ ಶಂಕಿಸಲಾಗು ತ್ತಿದೆ. ಬೆಂಕಿ ತಗಲಿದ ವೇಳೆ ಮನೆಯೊ ಳಗಿದ್ದ ಗ್ಯಾಸ್ ಸಿಲಿಂಡರ್ ಮತ್ತು ಇತರ ಅಪಾಯಕಾರಿ ಸಾಮಗ್ರಿಗಳನ್ನು ಊರ ವರೇ ಮೊದಲು ಮನೆಯಿಂದ ಹೊರಕ್ಕೆ ಸಾಗಿಸಿ ಆ ಮೂಲಕ ಸಂಭಾವ್ಯ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ದಾಖಲು ಪತ್ರಗಳು, ಪೀಠೋಪಕ ರಣಗಳು, ಬಟ್ಟೆಬರೆ ಸೇರಿದಂತೆ ಎಲ್ಲಾ ಸಾಮಗ್ರಿ ಗಳು ಬೆಂಕಿಗಾಹುತಿ ಯಾಗಿವೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page