ಬೇಳದಲ್ಲಿ ಬೀಗ ಜಡಿದ ಮನೆಯಿಂದ ನಗ-ನಗದು ಕಳವು
ನೀರ್ಚಾಲು: ಇಲ್ಲಿನ ಬೇಳದಲ್ಲಿ ಬೀಗ ಜಡಿದ ಮನೆಗೆ ನುಗ್ಗಿದ ಕಳ್ಳರು 5 ಪವನ್ ಚಿನ್ನಾಭಾರಣ ಹಾಗೂ 80 ಸಾವಿರ ರೂಪಾಯಿಗಳನ್ನು ದೋಚಿದ್ದಾರೆ. ಬೇಳದ ಜಯಪ್ರಸಾದ್ ಆಳ್ವ ಎಂಬವರ ಮನೆಯಿಂದ ಈ ಕಳವು ನಡೆದಿದೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕೊಠಡಿಯಲ್ಲಿದ್ದ ಐದು ಕಪಾಟುಗಳನ್ನು ಮುರಿದು ನಗ-ನಗದು ದೋಚಿದ್ದಾರೆ. ಜಯಪ್ರಸಾದ್ ಆಳ್ವ ಹಾಗೂ ಪತ್ನಿ ಮನೆಗೆ ಬೀಗ ಜಡಿದು ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿರುವ ಮಕ್ಕಳ ಮನೆಗೆ ತೆರಳಿದ್ದರು. ಇಂದು ಮುಂಜಾನೆ ಮರಳಿ ಬಂದಾಗಲೇ ಮನೆಗೆ ಕಳ್ಳರು ನುಗ್ಗಿದ ವಿಷಯ ತಿಳಿದುಬಂದಿದೆ. ಈ ಬಗ್ಗೆ ಜಯಪ್ರಸಾದ್ ಆಳ್ವ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.