ಬೈಕ್‌ಗೆ ಶಾಲಾ ಬಸ್ ಢಿಕ್ಕಿ: ಪತಿಯೊಂದಿಗೆ ಸಂಚರಿಸುತ್ತಿದ್ದ ಅಂಗನವಾಡಿ ಅಧ್ಯಾಪಿಕೆ ಮೃತ್ಯು

ಕಾಸರಗೋಡು: ಪತಿಯೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಶಾಲಾ ಬಸ್ ಢಿಕ್ಕಿ ಹೊಡೆದು ಅಂಗನವಾಡಿ ಅಧ್ಯಾಪಿಕೆ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಪಳ್ಳಿಕೆರೆ ಪಾಕಂ ಅಂಬಲತ್ತುಂಕಾವ ನಿವಾಸಿ ಸಿ. ಕುಂಞಿರಾ ಮನ್‌ರ ಪತ್ನಿ ಶಾರದ (55) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಸಂಜೆ ಕಾಞಂಗಾಡ್ ನೋರ್ತ್ ನ ಕೋಟಚ್ಚೇರಿಯಲ್ಲಿ ಅಪಘಾತವುಂ ಟಾಗಿದೆ. ಕಾಞಂಗಾಡ್‌ಗೆ ತೆರಳಿದ್ದ ದಂಪತಿ ಮರಳಿ ಮನೆಗೆ ತೆರಳುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಬೈಕ್‌ನ ಹಿಂಬದಿಗೆ ಶಾಲಾ ಬಸ್ ಢಿಕ್ಕಿ ಹೊಡೆದಿದೆ.  ಇದರಿಂದ ರಸ್ತೆಗೆ ಬಿದ್ದ ಶಾರದಾರ ತಲೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಅವರು ಮೃತಪಟ್ಟರು.

ಅಪಘಾತದಲ್ಲಿ ಕುಂಞಿರಾ ಮನ್  ಕೂಡಾ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು.  ಶಾರದಾ ಪಳ್ಳಿಪುಳ ಜ್ಯೋತಿನಗರದ ಅಂಗನವಾಡಿಯ ಅಧ್ಯಾಪಿಕೆಯಾಗಿದ್ದಾರೆ.

ಮೃತರು ಮಕ್ಕಳಾದ ಶ್ರೀರಾಜ್, ಶರಣ್ಯ, ಶ್ರುತಿ, ಸೊಸೆ ಜಯಶ್ರೀ, ಅಳಿಯಂದಿರಾದ ಬಾಲಚಂದ್ರನ್,  ಚಂದ್ರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page