ಬ್ಯಾಂಕ್ ಮೆನೇಜರ್ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಬ್ಯಾಂಕ್‌ನ ಮೆನೇಜರ್‌ರೊಬ್ಬರು ನೇಣ ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಡನಾಡು  ಸೇವಾ ಸಹಕಾರಿ ಬ್ಯಾಂಕ್‌ನ ಕಳತ್ತೂರು ಬ್ರಾಂಚ್ ಮೆನೇಜರ್ ನಾರಂಪಾಡಿ ಬಳಿಯ ನೆಲ್ಲಿಯಡ್ಕ  ಪಳ್ಳ ನಿವಾಸಿ ರಾಮಚಂದ್ರ (೪೬) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಇವರು ಮನೆಯ ಬಚ್ಚಲು ಕೋಣೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ರಾಮಚಂದ್ರ ನಿನ್ನೆ ಬ್ಯಾಂಕ್‌ಗೆ ರಜೆ ಹಾಕಿದ್ದರೆನ್ನಲಾಗಿದೆ.

ಪತ್ನಿ ಮವ್ವಾರಿನಲ್ಲಿರುವ ತಾಯಿ ಮನೆಗೆ, ಪುತ್ರ ಶಾಲೆಗೆ ತೆರಳಿದ್ದರು. ಇದರಿಂದ ಮನೆಯಲ್ಲಿ ರಾಮಚಂದ್ರ ಒಬ್ಬರೇ ಇದ್ದರೆನ್ನಲಾಗಿದೆ. ಸಂಜೆ ೪ ಗಂಟೆ ವೇಳೆ ನೆರೆಮನೆಯೊಬ್ಬರು ಅತ್ತ ತೆರಳಿದಾಗ ಬಚ್ಚಲು ಕೋಣೆಯಲ್ಲಿ ರಾಮಚಂದ್ರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆಂದು ಹೇಳಲಾಗುತ್ತಿದೆ. ಬದಿಯಡ್ಕ ಪೊಲೀಸರು  ಸ್ಥಳಕ್ಕೆ ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.

ಮೇಲ್ಪರಂಬ ಪಳ್ಳಿಪುರಂ ನಿವಾಸಿ ದಿ|  ಲಕ್ಷ್ಮಣ- ಭಾನುಮತಿ ದಂಪತಿಯ ಪುತ್ರನಾದ ಮೃತರು ಪತ್ನಿ ಕಮಲಾಕ್ಷಿ, ಪುತ್ರ ವೈಶಾಕ್ (೯ನೇ ತರಗತಿ ವಿದ್ಯಾರ್ಥಿ), ಸಹೋದರ- ಸಹೋದರಿಯರಾದ ಸುರೇಂದ್ರ, ಹರೀಶ, ಮನಮೋಹನ, ರಾಜೇಶ್, ಮುರಳಿ, ರಾಜೇಶ್ವರಿ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page