ಮಚ್ಚಂಪಾಡಿ ಕಿಟ್ಟನಗುಂಡಿಯಲ್ಲಿ ತ್ಯಾಜ್ಯ ಸಂಸ್ಕರಣಾ ಸ್ಥಾವರ ಯೋಜನೆ ಕೈಬಿಡಬೇಕು-ಕ್ರಿಯಾ ಸಮಿತಿ

ಕಾಸರಗೋಡು:  ಮಂಜೇಶ್ವರ ಪಂಚಾಯತ್‌ನ ಏಳನೇ ವಾರ್ಡ್‌ನ ಮಚ್ಚಂಪಾಡಿ ಕಿಟ್ಟನಗುಂಡಿಯಲ್ಲಿ ಆರಂಭಿಸಲಾಗುವ ತ್ಯಾಜ್ಯ ಸಂಸ್ಕರಣಾ ಸ್ಥಾವರ (ಫಿಕಲ್ ಸ್ಲಜ್ಡ್ ಟ್ರೀಟ್‌ಮೆಂಟ್ ಪ್ಲಾಂಟ್) ಯೋಜನೆಯನ್ನು ಕೈಬಿಡಬೇಕೆಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳು ಕಾಸರಗೋಡು  ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಪಟ್ಟಿದ್ದಾರೆ.

2005ರಲ್ಲಿ ಕ್ಲೀನ್ ಕೇರಳ ಮಿಶನ್ ಮೂಲಕ ಈ ಪ್ರದೇಶದಲ್ಲಿ ಘನತ್ಯಾಜ್ಯ ಸಂಸ್ಮರಣಾ ಸ್ಥಾವರ ಆರಂಭಿಸಲು ತೀರ್ಮಾನಿಸಲಾಗಿತ್ತು.  ಬಳಿಕ ಸ್ಥಳೀಯರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಕೈಬಿಡಲಾಗಿತ್ತು. ಈ ಪ್ರದೇಶವಾಸಿಗಳಿಗಾಗಲೀ, ಗ್ರಾಮ ಸಭೆಯನ್ನು ಕರೆದು ಚರ್ಚಿಸಲಾಗಲೀ ಅಥವಾ ಇತರ ಯಾವುದೇ ರೀತಿಯ ಅವಲೋಕನೆಯನ್ನೂ ನಡೆಸದೆ ಇದೇ ಪ್ರದೇಶದಲ್ಲಿ ಈಗ ತ್ಯಾಜ್ಯ ಸಂಸ್ಕರಣಾ ಸ್ಥಾವರ ಆರಂಭಿಸಲು ಸಂಬಂಧಪಟ್ಟವರು ಮುಂದಾಗಿದ್ದಾರೆ. ಮಂಜೇಶ್ವರ ಮತ್ತು ವರ್ಕಾಡಿ ಪಂಚಾಯತ್‌ಗಳ ನಾಲ್ಕು ವಾರ್ಡ್‌ಗಳಿಗಾಗಿ ಈ ಪ್ರದೇಶದಲ್ಲಿ ಸ್ಥಾವರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪ್ರದೇಶದಲ್ಲಿ  ೩೦೦ಕ್ಕಿಂತಲೂ ಹೆಚ್ಚು ಮನೆಗಳಿವೆ. ಆದರೆ ಅವರೆಲ್ಲಾ ಈ ಯೋಜನೆಯ ವಿರುದ್ದ ಈಗ ಧ್ವನಿಯೆತ್ತಿದ್ದಾರೆ. ಆದ್ದರಿಂದ ಅವರನ್ನೆಲ್ಲಾ ಒಗ್ಗೂಡಿಸಿ ಈ ಯೋಜನೆಯ ವಿರುದ್ದ ಹೋರಾಟ ನಡೆಸಲಾಗುವುದೆಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಪಿ.ಎಚ್. ಅಬ್ದುಲ್ ಹಮೀದ್, ಅಬ್ದುಲ್ ಹಮೀದ್ ಬಡಾಜೆ, ಆರೀಫ್ ಮಚ್ಚಂಪಾಡಿ, ಖಲೀಲ್ ಮಜಾಲ್, ಅಬ್ದುಲ್ ರಜಾಕ್  ಕಿಟ್ಟನಗುಂಡಿ, ಅಬೂಬಕರ್ ಸಿದ್ದಿಕ್, ಪಿ. ಮುಹಮ್ಮದ್ ಮತ್ತು ಅಬ್ದುಲ್ ರಹಿಮಾನ್ ಪುಚ್ಚತ್ತಬೈಲು ತಿಳಿಸಿದ್ದಾರೆ.

You cannot copy contents of this page