ಮರಬಿದ್ದು ಬೆಳಿಂಜ ಎಎಲ್ಪಿ ಶಾಲೆಗೆ ಹಾನಿ: ಜಿಲ್ಲಾಧಿಕಾರಿ ತಂಡ ಭೇಟಿ
ಕುಂಬ್ಡಾಜೆ: ಬಿರುಸಿನ ಗಾಳಿಗೆ ಮರ ಬಿದ್ದು ಹಾನಿಯಾದ ಬೆಳಿಂಜ ಎಎಲ್ಪಿ ಶಾಲೆಗೆ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಭೇಟಿ ನೀಡಿದರು. ಹೆಂಚು ಹಾಕಿದ ಛಾವಣಿ ಹಾಗೂ ಶೀಟು ಹಾಯಿಸಿದ ಭಾಗ ಮರಬಿದ್ದು ಹಾನಿಯಾಗಿದೆ. ಶಾಲೆಗೆ ಇಂದು ರಜೆ ಸಾರಲಾಗಿದೆ. ಶಾಲೆಯ ಛಾವಣಿ ದುರಸ್ತಿಯಾಗುವವರೆಗೆ ತರಗತಿಗಳು ನಷ್ಟವಾಗದಂತೆ ನೋಡಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲು ಇಂದು ಪಿಟಿಎ ಸಭೆ ಜರಗಲಿದೆ. ಪಿಡಬ್ಲ್ಯುಡಿ ಬಿಲ್ಡಿಂಗ್ ಬದಿಯಡ್ಕ ಎ.ಇ ಶ್ರೀನಿತ್ ಕುಮಾರ್ ದುರಸ್ತಿ ಕಾಮಗಾರಿ ಶೀಘ್ರ ಪೂರ್ತಿಗೊಳಿಸುವುದಾಗಿ ತಿಳಿಸಿದರು. ಪಂಚಾಯತ್ ಅಧ್ಯಕ್ಷ ಪೊಸಳಿಗೆ, ವಿಲ್ಲೇಜ್ ಆಫೀಸರ್ ಎಸ್.ಲೀಲಾ, ಎಇಒ ಎಂ. ಶಶಿಧರ, ಮುಖ್ಯೋಪಾಧ್ಯಾಯ ಕೆ. ರವೀಂದ್ರನ್ ಜೊತೆಗಿದ್ದರು.