ಮುಂದುವರಿದ ಅಬಕಾರಿ ಕಾರ್ಯಾಚರಣೆ: ಮದ್ಯ, ಗಾಂಜಾ ವಶ

ಕಾಸರಗೋಡು: ಅಬಕಾರಿ ದಳ ಆರಂಭಿಸಿರುವ ದಾಳಿ ಇನ್ನೂ ಮುಂದು ವರಿಯುತ್ತಿದೆ. ಅದರಂತೆ ನಡೆಸಲಾದ ಕಾರ್ಯಾಚರಣೆಯಲ್ಲಿ ಗಾಂಜಾ ಮತ್ತು ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಲಾಗಿದೆ.
ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಸಿ.ಕೆ.ವಿ ಸುರೇಶ್ ನೇತೃತ್ವದ ತಂಡ ಬೇಳ ಉಳ್ಳೋಡಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 546 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಇದಕ್ಕೆ ಸಂಬAಧಿಸಿ ಉಳ್ಳೋಡಿಯ ಕೃತಿಗುರು (32) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಆ ವೇಳೆ ಇಬ್ಬರು ಪರಾರಿಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಪ್ರಶಾಂತ್ ಕುಮಾರ್ ವಿ, ನೌಶಾದ್ ಕೆ, ಸಿವಿಲ್ ಎಕ್ಸೈಸ್ ಆಫೀಸರ್ ಸೋನು ಸೆಬಾಸ್ಟಿನ್ ಮೊದಲಾದವರು ಒಳಗೊಂಡಿದ್ದರು. ಇದೇ ರೀತಿ ಅಬಕಾರಿ ತಂಡ ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ 4 ಗ್ರಾಂ ಒಣಗಿದ ಗಾಂಜಾ ಸಾಗಿಸಿದ ಆರೋಪದಂತೆ ಉಳ್ಳಾಲ ಮುಖಚ್ಚೇರಿ ಧರ್ಮನಗರದ ನವಾಸ್ (40) ಎಂಬಾತನನ್ನು ಎಕ್ಸೈಸ್ ಇನ್ಸ್ಪೆಕ್ಟರ್ ಗಂಗಾಧರನ್ ಕೆ.ವಿ ನೇತೃತ್ವದ ತಂಡ ಬಂಧಿಸಿದೆ.
ಕುಂಬಳೆ ಕೊಯಿಪ್ಪಾಡಿ ದೇವಿನಗರದಲ್ಲಿ ಅಬಕಾರಿ ತಂಡ ನಡೆಸಿದ ಇನ್ನೊಂದು ಕಾರ್ಯಾಚರ ಣೆಯಲ್ಲಿ 4.14 ಲೀಟರ್ ಕರ್ನಾಟಕ ಮದ್ಯ ಮತ್ತು 9.75 ಲೀಟರ್ ಕೇರಳ ಮದ್ಯ ಕೈವಶವಿರಿಸಿಕೊಂಡ ಆರೋಪದಂತೆ ದೇವಿನಗರ ನವೀನ್ ಕುಮಾರ್ ಕೆ (48) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕುಂಬಳೆ ಎಕ್ಸೈಸ್ ರೇಂಜ್ನ ಪ್ರಿವೆಂಟೀವ್ ಆಫೀಸರ್ ಮೊಯ್ದೀನ್ ಸಾದಿಕ್ ನೇತೃತ್ವದಲ್ಲಿ ಅಬಕಾರಿ ಸಿಬ್ಬಂದಿಗಳಾದ ಎಂ.ಎA. ಜಿತಿನ್ ವಿ ಮತ್ತು ಪ್ರವೀಣ್ ಎಂಬವರನ್ನೊಳಗೊAಡ ತಂಡ ಈ ಕಾರ್ಯಾಚರಣೆ ನಡೆಸಿದೆ.
ಇದೇ ರೀತಿ ಪನಯಾಲ್ ಮೈಲಾಟಿಯಲ್ಲಿ ಹೊಸದುರ್ಗ ಎಕ್ಸೈಸ್ ಸರ್ಕಲ್ ಆಫೀಸ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಕೆ.ಕೆ. ಬಾಲಕೃಷ್ಣನ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 3.96 ಲೀಟರ್ ಕರ್ನಾಟಕ ಮದ್ಯ (180 ಎಂ.ಎಲ್.ನ 22 ಪ್ಯಾಕೆಟ್) ವಶಪಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಮೈಲಾಟಿಯ ಅಮೃ ತೇಶ್ವರ ಎ ಎಂಬಾತನನ್ನು ಅಬಕಾರಿ ತಂಡ ಬಂಧಿಸಿ ಕೇಸು ದಾಖಲಿಸಿದೆ.

Leave a Reply

Your email address will not be published. Required fields are marked *

You cannot copy content of this page