ಮುಂಬಯಿಯಲ್ಲಿ ಅಪಘಾತ: ಚಿಕಿತ್ಸೆಯಲ್ಲಿದ್ದ ಉಪ್ಪಳ ನಿವಾಸಿ ಮೃತ್ಯು

ಉಪ್ಪಳ: ನವಿಮುಂಬಯಿಯಲ್ಲಿ ಕಾರು ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ಉಪ್ಪಳ ನಿವಾಸಿ ಮೃತಪಟ್ಟರು. ಮುಂಬಯಿ ವಿಮಾನ ನಿಲ್ದಾಣದ ನಿವೃತ್ತ ಕಸ್ಟಮ್ಸ್ ಅಧಿಕಾರಿ ಉಪ್ಪಳ ಮಳ್ಳಂಗೈ ನಾಟೆಕಲ್ ನಿವಾಸಿ ಅಬ್ದುಲ್ ಖಾದರ್ (78) ಮೃತಪಟ್ಟವರು. ಹಲವು ವರ್ಷಗಳಿಂದ ಇವರು ಕುಟುಂಬ ಸಮೇತ ನವಿ ಮುಂಬ ಯಿಯಲ್ಲಿ ವಾಸವಾಗಿದ್ದಾರೆ. ಕಳೆದ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಇವರು ಗಂಭೀರ ಗಾಯಗೊಂಡಿದ್ದರು. ನಿನ್ನೆ ನಿಧನ ಸಂಭವಿಸಿದೆ.

ಮೃತರು ಪತ್ನಿ ಸುಹರಾ, ಮಕ್ಕಳಾದ ಫರ್ಸೀನ, ರಿಸ್ವಾನ, ನಸ್ರಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page