ಯುವಕ ನೇಣು ಬಿಗಿದು ಸಾವು
ಮಂಜೇಶ್ವರ: ಯುವಕನೋರ್ವ ಕ್ವಾರ್ಟರ್ಸ್ನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬಿಹಾರ ನಿವಾಸಿ ಸುಭಾಶ್ರಾಮ್ ಎಂಬವರ ಪುತ್ರ, ಕಡಂಬಾರ್ನ ಕ್ವಾರ್ಟರ್ಸ್ನಲ್ಲಿ ವಾಸಿಸುವ ಸೂರಜ್ ಕುಮಾರ್ (19) ಸಾವಿಗೀಡಾದ ಯುವಕನಾಗಿ ದ್ದಾನೆ. ಕಡಂಬಾರ್ನ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈತ ಇತರ ಕೆಲವರೊಂದಿಗೆ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದನು. ನಿನ್ನೆ ಅಪರಾಹ್ನ ೩ ಗಂಟೆಗೆ ಸಂಬಂಧಿಕ ಆದಿತ್ಯ ಕುಮಾರ್ ಎಂಬಾತ ಕ್ವಾರ್ಟರ್ಸ್ಗೆ ಹೋದಾಗ ಸೂರಜ್ ಕುಮಾರ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆನ್ನ ಲಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.