ಯುವಕ ಮನೆಯೊಳಗೆ ನೇಣುಬಿಗಿದು ಸಾವು
ಮುಳ್ಳೇರಿಯ: ಅಡೂರು ಬಳಿಯ ಮಣಿಯೂರಿನಲ್ಲಿ ಯುವಕನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕೊಪ್ಪಳಗುರಿ ನಿವಾಸಿ ದಿ| ನಾರಾಯಣ ಬೆಳ್ಚಪ್ಪಾಡರ ಪುತ್ರ ಸಂತೋಷ್ (38) ಸಾವಿಗೀಡಾದ ಯುವಕ. ಘಟನೆ ಬಗ್ಗೆ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ತಾಯಿ ದೇವಕಿ, ಸಹೋದರ ಶಶಿ ಕುಮಾರ್, ಸಹೋ ದರಿ ಬಿಂದು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.