ಯೂತ್ ಕಾಂಗ್ರೆಸ್ ನೇತಾರರ ಮೇಲೆ ಪೊಲೀಸ್ ಲಾಠಿ ಪ್ರಹಾರ ಪ್ರತಿಭಟಿಸಿ ಬದಿಯಡ್ಕದಲ್ಲಿ ಮಂಡಲ ಕಾಂಗ್ರೆಸ್‌ನಿಂದ ಮೆರವಣಿಗೆ

ಬದಿಯಡ್ಕ: ಸೆಕ್ರೆಟರಿಯೇಟ್‌ಗೆ ಮಾರ್ಚ್ ನಡೆಸಿದ ಯೂತ್ ಕಾಂಗ್ರೆಸ್ ನೇತಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಗಂಭೀರ ಗಾಯಗೊಳಿಸಿರುವುದನ್ನು ಪ್ರತಿಭಟಿಸಿ ಬದಿಯಡ್ಕ ಪೇಟೆಯಲ್ಲಿ ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ನಿನ್ನೆ ಮೆರವಣಿಗೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ, ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ನಾರಾಯಣ ಮಣಿಯಾಣಿ ನೀರ್ಚಾಲು, ಗಂಗಾಧರ ಕೋಳಿಯಡ್ಕ, ಚಂದ್ರಹಾಸ ರೈ, ಇತರ ನೇತಾರರಾದ ತಿರುಪತಿ ಕುಮಾರ್ ಭಟ್, ಜಗನ್ನಾಥ ರೈ, ಕೃಷ್ಣದಾಸ್, ಶಾಫಿ ಗೋಳಿಯಡ್ಕ, ಶ್ರೀನಾಥ್, ಕೃಷ್ಣಕುಮಾರ್, ಕುಮಾರನ್ ನಾಯರ್, ಸಿರಿಲ್ ಡಿ’ಸೋಜ, ಬಲ್ತೀಸ್ ಕ್ರಾಸ್ತ, ರೋಹಿತಾಕ್ಷನ್, ಶಾಫಿ ಗೋಳಿಯಡಿ, ರಾಮ ಗೋಳಿಯಡ್ಕ, ಸತೀಶ್ ಪೆರುಮುಂಡ, ಕಮರುದ್ದೀನ್, ಜೋಸೆಫ್ ಕ್ರಾಸ್ತ, ನಿಜೇಶ್ ಎಂ., ಉದಯನ್, ಸವಾದ್, ಯತೀಶ್ ಮೊದಲಾದವರು ನೇತೃತ್ವ ನೀಡಿದರು.

Leave a Reply

Your email address will not be published. Required fields are marked *

You cannot copy content of this page