ರಸ್ತೆ ಬದಿಯಲ್ಲಿದ್ದ ಸ್ಕೂಟರ್ ಕಳವು

ಕಾಸರಗೋಡು: ರಸ್ತೆ ಬದಿ ನಿಲ್ಲಿಸಲಾಗಿದ್ದ ಸ್ಕೂಟರ್ ಕಳವುಗೈದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ತೆಕ್ಕಿಲ್‌ಫೆರಿ ಮಂಞಂಗಾಲ್ ನಿವಾಸಿ ಮೊಹಮ್ಮದ್ ಶೆರೀಫ್ ಎಂಬವರ ಸ್ಕೂಟರ್ ಕಳವು ಹೋಗಿದೆ. ಇವರು ಮೊನ್ನೆ ರಾತ್ರಿ ಚೆರ್ಕಳ ಪೇಟೆಂiiಲ್ಲಿ ಸ್ಕೂಟರ್ ನಿಲ್ಲಿಸಿ ಸಾಮಗ್ರಿ ಖರೀದಿಸಲೆಂದು ಹೋಗಿ ಹಿಂತಿರುಗಿ ಬರುವಷ್ಟ ರಲ್ಲಿ ಅವರ ಸ್ಕೂಟರ್ ಕಳವುಗೈಯ್ಯಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದರಂತೆ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page