ರಾ. ಹೆದ್ದಾರಿ ಹಾನಿ: ಕೇಂದ್ರ ಸಚಿವ ಗಡ್ಕರಿಯೊಂದಿಗೆ ಚರ್ಚೆ-ಸಿ.ಎಂ
ತಿರುವನಂತಪುರ: ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕೆಲವೆಡೆ ಹಾನಿಗೀಡಾದ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಮುಂದಿನ ವಾರ ನೇರವಾಗಿ ಭೇಟಿಯಾಗಿ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಹಾನಿ ಸಂಭವಿಸಿರುವುದು ಕೆಲವು ತಾಂತ್ರಿಕ ಕಾರಣಗಳಿಂದಾಗಿದೆ. ಹೆದ್ದಾರಿ ಕಾಮಗಾರಿ ನಿಗದಿತ ಸಮಯದಲ್ಲೇ ಪೂರ್ತಿಗೊಳಿಸಲಾ ಗುವುದು. ರಾಷ್ಟ್ರೀಯ ಹೆದ್ದಾರಿ ಪೂರ್ಣವಾಗಿ ನಾಶಗೊಳ್ಳಲಿದೆ ಯೆಂದು ಯಾರೂ ಭಾವಿಸಬೇಡಿ ಎಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ.