ರಿಯಾಸ್ ಮೌಲವಿ ಕೊಲೆ ಪ್ರಕರಣ: ತೀರ್ಪು ಜ. ೨೭ರಂದು
ಕಾಸರಗೋಡು: ಕಾಸರಗೋ ಡಿನಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಕಾಸರಗೋಡು ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ ಮೂಲತಃ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ (೨೭)ರ ಕೊಲೆ ಪ್ರಕರಣ ತೀರ್ಪನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ಕೆ.ಕೆ. ಬಾಲಕೃಷ್ಣನ್ ಅವರು ಜನವರಿ ೨೭ರಂದು ನೀಡಲಿರುವರು.
೨೦೧೭ ಮಾರ್ಚ್ ೨೦ರಂದು ರಾತ್ರಿ ೧೨ ಗಂಟೆ ವೇಳೆಗೆ ಹಳೇ ಸೂರ್ಲಿನ ಮದ್ರಸಾದ ಕಟ್ಟಡದಲ್ಲಿ ನಿದ್ರಿಸುತ್ತಿದ್ದ ರಿಯಾಸ್ ಮೌಲವಿಯವರನ್ನು ಅಕ್ರಮಿಗಳು ಇರಿದು ಕೊಲೆಗೈದಿದ್ದರು.
ಕೇಳುಗುಡ್ಡೆಯ ಅಜೇಶ್ ಅಲಿಯಾಸ್ ಅಪ್ಪು, ಪೆರಿಯಡ್ಕದ ನಿತಿನ್ (೨೧), ಅಖಿಲೇಶ್ ಯಾನೆ ಅಖಿಲ್ (೨೫) ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಸ್ಪೆಷಲ್ ಪ್ರೋಸಿಕ್ಯೂಟರ್ ಟಿ. ಶಾಜಿ ಪ್ರೋಸಿಕ್ಯೂಷನ್ ಪರ ವಾದಿಸಿದ್ದಾರೆ.ಕೊಲೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದರು. ಹೀಗೆ ಬಂಧಿತರಾದ ಆರೋಪಿಗಳು ಜಾಮೀನು ಲಭಿಸದೆ ಕಳೆದ ಆರು ವರ್ಷಗಳಿಂದ ನ್ಯಾಯಾಂಗ ಇನ್ನೂ ಬಂಧನದಲ್ಲೇ ಕಳೆಯುತ್ತಿದ್ದಾರೆ. ಅಂದು ಕಣ್ಣೂರು ಕ್ರೈಮ್ಬ್ರಾಂಚ್ ಎಸ್ಪಿಯಾಗಿದ್ದ ಡಾ. ಎ. ಶ್ರೀನಿವಾಸ್ರ ನೇತೃತ್ವದ ವಿಶೇಷ ತಂಡ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿ ಸಿದ ೯೦ ದಿನಗಳೊಳಗಾಗಿ ನ್ಯಾಯಾಲ ಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು