ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದು ಪರಾರಿಯಾದ ಕಾರು ಪತ್ತೆ: ಮಾಲಕ ಸೆರೆ

ಹೊಸದುರ್ಗ: ಶಾಲಾ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ ವಾಹನವನ್ನು ನೀಲೇಶ್ವರ ಪೊಲೀಸರು ಪತ್ತೆಹಚ್ಚಿ ದ್ದಾರೆ. ಕಳೆದ ತಿಂಗಳ ೨೬ರಂದು ಸಂಜೆ ನೆಲ್ಲಿಯಾಡಂ ಎಯುಪಿ ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಕಿನಾನೂರ್ ಪಳ್ಳಂ ಅನಾಪ್‌ನ ಶಶಿಕುಮಾರ್‌ರ ಪುತ್ರಿ ಶ್ರೀನಂದ (೧೩)ಳಿಗೆ ಢಿಕ್ಕಿ ಹೊಡೆದು ವ್ಯಾಗನರ್ ಕಾರು ಪರಾರಿಯಾಗಿತ್ತು. ಈ ಕಾರು ಪರಪ್ಪ ಕ್ಲಾಯಿಕೋಟೆ ಅಬ್ದುಲ್ ಜಲೀಲ್ (೪೨)ನದ್ದಾಗಿದ್ದು, ಈತನನ್ನು ಸೆರೆಹಿಡಿಯಲಾಗಿದೆ.

You cannot copy contents of this page