ವಿದ್ಯಾರ್ಥಿಯ ಕಾಲು ಮುರಿದ ಪ್ರಕರಣ: ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಕೇಸು
ಹೊಸದುರ್ಗ: ಟರ್ಫ್ನಲ್ಲಿ ಫುಟ್ಬಾಲ್ ಆಟ ನೋಡಲು ಬಂದ 9ನೇ ತರಗತಿ ವಿದ್ಯಾರ್ಥಿ ಪಳ್ಳಿಕೆರೆ ತೆಕ್ಕೇಕುನ್ನು ನಿವಾಸಿ ವಿಶಾಖ್ ಕೃಷ್ಣನ್ನ ಮೇಲೆ ಹಲ್ಲೆ ನಡೆಸಿ ಅದರಿಂದ ಆತ ಕಾಲಿನ ಮೂಳೆ ಮುರಿತ ಕ್ಕೊಳಗಾದ ಪ್ರಕರಣಕ್ಕೆ ಸಂಬಂಧಿಸಿ ೧೦ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕ ರಣ ದಾಖಳಿಸಿಕೊಂಡಿದ್ದಾರೆ.
ಆರೋಪಿಗಳಾದ ವಿದ್ಯಾ ರ್ಥಿ ಗಳನ್ನು ಈತನಕ ಬಂಧಿಸಲಾಗಿಲ್ಲ. ಅವರ ಹೆತ್ತವರಿಗೆ ನೋಟೀಸ್ ಜ್ಯಾರಿಗೊಳಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.