ವಿವಾಹ ಭರವಸೆಯೊಡ್ಡಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕ ಸೆರೆ
ಕಾಸರಗೋಡು: ಮದುವೆಯಾ ಗುವುದಾಗಿ ಭರವಸೆಯೊಡ್ಡಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಯುವಕ ಕೊನೆ ಗೂ ಪೊಲೀಸರ ಕೈಗೆ ಸಿಲುಕಿದ್ದಾನೆ.
ತೃಶೂರು ಕೈಪಮಂಗಲ ಕುರಿಕ್ಕುಳಿ ನಿವಾಸಿ ಶೋಭಿ ಅಲಿಯಾಸ್ ಪಿ.ಎಸ್. ಪ್ರಶೋಬ್ (30) ಬಂಧಿತ ಆರೋಪಿ. ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ರ ಮೇಲ್ನೋಟದಲ್ಲಿ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ. ಅಜಿತ, ಪೊಲೀಸ್ ಸ್ಕ್ವಾಡ್ ಸದಸ್ಯರುಗಳಾದ ಎಸ್ಐ ನಾರಾಯಣನ್, ಎಎಸ್ಐ ಸಾಜು ಎಂಬವರನ್ನೊಳಗೊಂಡ ಪೊಲೀಸರ ತಂಡ ಈತನನ್ನು ಬಂಧಿಸಿದೆ.
ಮೋಡೆಲಿಂಗ್ ಇತ್ಯಾದಿಗಳಲ್ಲಿ ಅವಕಾಶ ಕೊಡಿಸುವುದೆಂದು ನಂಬಿಸಿ ಹಾಗೂ ಮದುವೆಯಾಗುವುದಾಗಿ ಭರವಸೆ ನೀಡಿ, ಮಹಿಳೆಯರನ್ನು ತನ್ನತ್ತ ಆಕರ್ಷಿಸಿ ಅವರಿಗೆ ಲೈಂಗಿಕ ಕಿರುಕುಳ ನೀಡುವುದು ಈತನ ರೀತಿಯಾಗಿದೆ. ವಿಶೇಷವಾಗಿ ವಿವಾಹ ವಿಚ್ಛೇಧನ ಹೊಂದಿರುವ ಮಹಿಳೆಯರನ್ನೇ ಇಂತಹ ಭರವಸೆ ನೀಡಿ ತನ್ನ ಬಲೆಗೆ ಬೀಳಿಸುತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಹೀಗೆ ಈತನಿಂದ ಲೈಂಗಿಕ ಕಿರುಕುಳಕ್ಕೊಳಗಾದವರ ಪೈಕಿ ಕಾಸರಗೋಡು ನಿವಾಸಿಯಾಗಿರುವ ಮಹಿಳೆಯೋರ್ವೆ ಇಲ್ಲಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತೃಶೂರಿಗೆ ಸಾಗಿ ಅಲ್ಲಿಂದ ಆರೋಪಿಯನ್ನು ಬಂಧಿಸಿ ದ್ದಾರೆ. ಆತನನ್ನು ನಂತರ ನ್ಯಾಯಾ ಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.