ವಿವಾಹ ಸಂಬಂಧ ಬೇರ್ಪಡಿಸಿದ ನ್ಯಾಯವಾದಿಯಿಂದ 7 ವರ್ಷದ ಪುತ್ರಿಗೆ ದೌರ್ಜನ್ಯ

ತೃಶೂರು: ಪೇರಮಂಗಳತ್ ಎಂಬಲ್ಲಿ ಪುತ್ರಿಯನ್ನು ದೌರ್ಜನ್ಯಗೈದ ದೂರಿನಂತೆ ನ್ಯಾಯವಾದಿ ಸೆರೆಯಾಗಿ ದ್ದಾನೆ. ಡಾಕ್ಟರಲ್ಲಿ ಮಗು ದೌರ್ಜನ್ಯದ ಬಗ್ಗೆ ತಿಳಿಸಿತ್ತು. 7 ವರ್ಷದ ಪುತ್ರಿಯನ್ನು ದೌರ್ಜನ್ಯಗೈದ ಪ್ರಕರಣದಲ್ಲಿ ನ್ಯಾಯ ವಾದಿಯನ್ನು ಸೆರೆ ಹಿಡಿಯಲಾಗಿದೆ. ತಂದೆ ತಾಯಿ ಎರಡು ವರ್ಷದ ಹಿಂದೆ ವಿವಾಹ ಸಂಬಂಧವನ್ನು ವಿಚ್ಛೇಧಿಸಿದ್ದರು. ನ್ಯಾಯಾಲಯದ ಆದೇಶ ದಂತೆ ಆದಿತ್ಯ ವಾರಗಳಂದು ತಂದೆಯ ಜೊತೆ ಮಗು ಇರಬೇಕೆಂದು ತೀರ್ಪು ನೀಡ ಲಾಗಿತ್ತು. ಈ ದಿನದಂದು ಮಗುವನ್ನು ದೌರ್ಜನ್ಯ ಗೈದಿರಬೇಕೆಂದು ಶಂಕಿಸಲಾ ಗಿದೆ.  ತೃಶೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತೆರಳಿದಾಗ ಡಾಕ್ಟರಲ್ಲಿ ತಂದೆ ತನ್ನನ್ನು ದೌರ್ಜನ್ಯಗೈದಿರು ವುದಾಗಿ ಬಾಲಕಿ ಹೇಳಿಕೆ ನೀಡಿದ್ದಾಳೆ. ಡಾಕ್ಟರ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ನಿನ್ನೆ ಬೆಳಿಗ್ಗೆ ಆರೋಪಿಯನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page