ವಿಷಪ್ರಾಶನಗೈದು ಚಿಕಿತ್ಸೆಯಲ್ಲಿದ್ದ ಕೃಷಿಕ ಸಾವು

ಕಾಸರಗೋಡು: ವಿಷಪ್ರಾಶನ ಗೈದು ಚಿಕಿತ್ಸೆಯಲ್ಲಿದ್ದ ಕೃಷಿಕ ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಪಾಡಿ ಅದ್ರುಕುಳಿಯ ನಾರಾಯಣ-ಕಮಲ ದಂಪತಿ ಪುತ್ರ ಗಂಗಾಧರನ್ (59) ಸಾವನ್ನಪ್ಪಿದ ವ್ಯಕ್ತಿ. ಇವರು ಮೊನ್ನೆ ಮನೆಯಲ್ಲಿ ವಿಷಪ್ರಾಶನಗೈದಿದ್ದಾರೆನ್ನಲಾ ಗಿದೆ.  ಬಳಿಕ ಅವರನ್ನ ಚೆಂಗಳದ ಆಸ್ಪತ್ರೆ ಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾ ಯಿತಾದರೂ ಫಲಕಾರಿಯಾಗ ದೆ ನಿನ್ನೆ ಸಾವನ್ನಪ್ಪಿದ್ದಾರೆ. ಅವಿವಾಹಿತರಾಗಿರುವ ಮೃತ ಗಂಗಾಧರನ್ ಹೆತ್ತವರ ಹೊರತಾಗಿ ಸಹೋದರ ಸುಧಾಕರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವಿದ್ಯಾನಗರ ಪೊಲೀಸರು  ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖ ನಡೆಸಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page