ಲಕ್ನೋ: ಅಯೋಧ್ಯೆಯ ಶ್ರೀ ರಾಮಕ್ಷೇತ್ರವನ್ನು ಬಾಂಬ್ ಇರಿಸಿ ನಾಶಪಡಿಸುವುದಾಗಿ ಸಾಮಾಜಿಕ ಜಾಲ ತಾಣದ ಮೂಲಕ ಬೆದರಿಕೆ ಯೊಡ್ಡಿದ ಇಬ್ಬರನ್ನು ಬಂಧಿಸಲಾಗಿದೆ. ತಹರ್ ಸಿಂಗ್, ಓಂಪ್ರಕಾಶ್ ಮಿಶ್ರ ಎಂಬಿವರು ಸೆರೆಯಾದವರು. ಸುಬೈರ್ ಖಾನ್ ಎಂ ಬಾತ ಬೆದರಿಕೆ ಸಂದೇಶಕ್ಕೆ ನೇತೃತ್ವ ನೀಡಿ ದ್ದು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಈತನಿಗೆ ಪಾಕಿಸ್ತಾನದ ಉಗ್ರಗಮಿ ಸಂW ಟನೆಯಾದ ಐಎಸ್ಐ ಯೊಂದಿಗೆ ಸಂಪ ರ್ಕವಿದೆಯೆಂದು ಪೊಲೀಸರು ತಿಳಿಸಿ ದ್ದಾರೆ. ಲಕ್ನೋದ ಗೋಮ್ತಿ ನಗರದಿಂದ ಉತ್ತರಪ್ರದೇಶದ ಸ್ಪೆಷಲ್ ಟಾಸ್ಕ್ ಫೋರ್ಸ್ ಇವರನ್ನು ಸೆರೆಹಿಡಿದಿದೆ.
