ಸಿಡಿಲು ಬಡಿದು ಮನೆ ಹಾನಿ ಮೂರು ಮಂದಿಗೆ ಗಾಯ

ಉಪ್ಪಳ: ಸಿಡಿಲು ಬಡಿದು ಹೊಸತಾಗಿ ನಿರ್ಮಿಸಿದ ಕಾಂಕ್ರೀಟ್ ಮನೆ ಹಾಗೂ ಇದರ ಪರಿಸರದಲ್ಲಿದ್ದ ಹೆಂಚು ಹಾಸಿದ ಅಡುಗೆ ಮಾಡುವ ಕೊಠಡಿ ಹಾನಿಗೊಂಡು ತಾಯಿ ಹಾಗೂ ಇಬ್ಬರು ಮಕ್ಕಳಿಗೆ ಗಾಯ ಗೊಂಡ ಘಟನೆ ನಡೆದಿದೆ. ಪೈವಳಿಕೆ ಪಂಚಾಯತ್‌ನ ಕಯ್ಯಾರು ಬೊಳಂ ಪಾಡಿ ನಿವಾಸಿ ದಿ| ಸಂಜೀವರ ಪತ್ನಿ ಯಮುನ (60), ಇವರ ಮಕ್ಕಳಾದ ಪ್ರಮೋದ್ (28), ಸುಧೀರ್ (21) ಗಾಯಗೊಂಡಿದ್ದು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಿನ್ನೆ ಸಂಜೆ ಸುಮಾರು 4 ಗಂಟೆಗೆ ಘಟನೆ ನಡೆದಿದೆ.
ಜೋರಾಗಿ ಮಳೆ ಜೊತೆ ಸಿಡಿಲು ಕಾಂಕ್ರೀಟ್ ಮನೆಗೆ ಹಾಗೂ ಪರಿಸರದಲ್ಲಿದ್ದ ಹೆಂಚು ಹಾಸಿದ ಅಡುಗೆ ಮಾಡುವ ಕೋಣೆಗೆ ಬಡಿದೆ. ಈ ವೇಳೆ ಹೆಂಚು ಪುಡಿ ಪುಡಿಯಾಗಿ ಒಳಗಡೆ ಕುಳಿತ್ತಿದ್ದವರು ಗಾಯಗೊಂ ಡಿದ್ದಾರೆ. ತಾಯಿ ಯಮುನರಿಗೆ ಸಿಡಿಲಿನ ಆಘಾತ ಉಂಟಾಗಿದೆ. ಕಾಂಕ್ರೀಟ್ ಮನೆಯ ಗೋಡೆ ಬಿರುಕು ಬಿಟ್ಟು ವಯರಿಂಗ್ ಪೂರ್ತಿ ಉರಿದು ನಾಶಗೊಂಡಿದೆ. ಹೆಂಚು ಹಾಸಿದ ಅಡುಗೆ ಕೊಠಡಿ ಗೋಡೆ ಕೂಡಾ ಬಿರುಕು ಬಿಟ್ಟು ಹಾನಿಗೊಂಡಿದೆ. ಸ್ಥಳಕ್ಕೆ ವಾರ್ಡ್ ಪ್ರತಿನಿದಿs ಅವಿನಾಶ್ ಮಚಾದೊ, ಬಿಜೆಪಿ ನೇತಾರರಾದ ಪ್ರದೀಪ್ ಪಟ್ಲ, ಪ್ರಸಾದ್ ರೈ ಕಯ್ಯಾರ್ ಸಹಕರಿಸಿದರು.

You cannot copy contents of this page