ಸುಭಾಸ್ನಗರದಲ್ಲಿ ಸಿಐಟಿಯು ಸ್ಥಾಪಕ ದಿನಾಚರಣೆ
ಉಪ್ಪಳ: ಸಿ.ಐ ಟಿ.ಯು ಸ್ಥಾಪಕ ದಿನಾಚರಣೆ ನಿನ್ನೆ ಸುಭಾಸ್ನಗರದಲ್ಲಿ ನಡೆಯಿತು. ಸುಬ್ರಹ್ಮಣ್ಯ ಆಚಾರಿ ಬೊಳ್ಳಾರು ದ್ವಜಾರೋಹಣಗೈದರು.
ಜಿಲ್ಲಾ ಉಪಾಧ್ಯಾಕ್ಷೆ ಬೇಬಿ ಶೆಟ್ಟಿ ಕಯ್ಯಾರು ಉದ್ಘಾಟಿಸಿದರು. ಸತೀಶ್ ಕನ್ನಟಿಪಾರೆ ಅಧ್ಯಕ್ಷತೆ ವಹಿಸಿದರು. ಸಿ.ಐ.ಟಿ.ಯು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬೊಳ್ಳಾರು ಸ್ವಾಗತಿಸಿ, ಪ್ರವೀಣ್ ಕುಮಾರ್ ಕನ್ನಟಿಪಾರೆ ವಂದಿಸಿದರು. ಬೇಕೂರು ಸರಕಾರಿ ಶಾಲಾ ತರಗತಿಗಳ ಕೊಠಡಿಗಳನ್ನು ಹಾಗೂ ಪರಿಸರವನ್ನು ಶುಚೀಗೊಳಿಸಲಾಯಿತು.