ಹೆಚ್ಚಿದ ತಾಪಮಾನ: ಜಾಗ್ರತೆ ಪಾಲಿಸಲು ಕರೆ

ತಿರುವನಂತಪುರ: ಕೇರಳದ   ಕೆಲವು ಕಡೆಗಳಲ್ಲಿ ಇಂದು ಸಾಧಾರಣಕ್ಕಿಂತಲೂ 2ರಿಂದ 3 ಡಿಗ್ರಿ ಸೆಲ್ಶಿಯಸ್ ವರೆಗೆ ತಾಪಮಾನ ಹೆಚ್ಚುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೆಚ್ಚಿದ ತಾಪಮಾನದಿಂದಾಗಿ ಬಿಸಿ ಉಂಟಾಗಿ ಅಸ್ವಸ್ಥತೆ ಸೃಷ್ಟಿಗೆ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗ್ರತೆ ಪಾಲಿಸಬೇಕೆಂದು ರಾಜ್ಯ ವಿಕೋಪ ನಿವಾರಣಾ ಪ್ರಾಧಿಕಾರ ಮುನ್ನೆಚ್ಚರಿಕೆ ನೀಡಿದೆ.

ಬೆಳಿಗ್ಗೆ 11ರಿಂದ ಸಂಜೆ 3 ಗಂಟೆವರೆಗಿರುವ ಸಮಯದಲ್ಲಿ ಸೂರ್ಯನ ಕಿರಣ ನೇರವಾಗಿ ದೇಹಕ್ಕೆ ಬೀಳದಂತೆ ಎಚ್ಚರ ವಹಿಸಬೇಕು, ಅಸ್ವಸ್ಥತೆ ಕಂಡುಬಂದರೆ ಕೂಡಲೇ ವೈದ್ಯರನ್ನು ಸಮೀಪಿಸಬೇಕು, ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಇತರ ಕಾಠಿಣ್ಯವಿರುವ ಕೆಲಸಗಳನ್ನು ಮಾಡುವವರು ತಮ್ಮ ಕೆಲಸದ ಸಮಯವನ್ನು ಕ್ರಮೀಕರಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page