ಹೊಯ್ಗೆ ಸಾಗಾಟ ಟಿಪ್ಪರ್ ಲಾರಿ ವಶ: ಚಾಲಕನ ವಿರುದ್ಧ ಕೇಸು

ಉಪ್ಪಳ; ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಮಂಜೇಶ್ವರ ಎಸ್.ಐ. ಪ್ರಶಾಂತ್ ನೇತೃತ್ವದಲ್ಲಿ ವಶಪಡಿಸಿ ಚಾಲಕನನ್ನು ಸೆರೆಹಿಡಿಯಲಾಗಿದೆ. ನಿನ್ನೆ ಸಂಜೆ ಹೊಸಬೆಟ್ಟು ಗುಡ್ಡಕೇರಿ ರಸ್ತೆಯಿಂದ ಟಿಪ್ಪರ್ ಲಾರಿಯನ್ನು ವಶಪಡಿಸಿ ಚಾಲಕ ಕೊಡ್ಲಮೊಗರು ಅಡೆಕ್ಕಳಕಟ್ಟೆ ನಿರೋಳಿಕೆ ನಿವಾಸಿ ಅಬೂಬಕರ್ ಸಮದ್ (೨೯)ನನ್ನು ಸೆರೆಹಿಡಿಯಲಾಗಿದೆ. ಹೊಸಂಗಡಿ ಭಾಗದತ್ತ ಹೊಳೆ ಹೊಯ್ಗೆಯನ್ನು ಸಾಗಿಸಲಾಗುತ್ತಿತ್ತು.

Leave a Reply

Your email address will not be published. Required fields are marked *

You cannot copy content of this page