೧೨೯ ಲೀಟರ್ ಕರ್ನಾಟಕ ಮದ್ಯ ವಶ : ಆಟೋ ರಿಕ್ಷಾ ಸಹಿತ ಇಬ್ಬರ ಸೆರೆ

ಕಾಸರಗೋಡು: ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್  ಆಂಟಿ ಕರಪ್ಶನ್ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟೀವ್ ಆಫೀಸರ್ ಸಾಜನ್  ಅಪ್ಯಾಲ್ ನೇತೃತ್ವದ ತಂಡ ಕಾಸರಗೋಡು ನಗರದ ನುಳ್ಳಿಪ್ಪಾಡಿಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೧೨೯.೬ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.  ಈ ಸಂಬಂಧ ಕುಂಬಳೆ ಪೇರಾಲ್ ಕಣ್ಣೂರಿನ ಸೂರಂಬೈಲು ನಿವಾಸಿ ನಾರಾಯಣನ್  ಎಂ (೫೮) ಮತ್ತು ಮಧೂರು ಗಣೇಶ ನಿವಾಸದ ಕಿರಣ್ ಕುಮಾರ್ (೪೮) ಎಂಬಿಬ್ಬರನ್ನು ಬಂಧಿಸಲಾಗಿದೆ. ಮಾಲು ಸಾಗಿಸಲು ಬಳಸಲಾದ ಆಟೋ ರಿಕ್ಷಾವನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂ ಡು ಪ್ರಕgಣ ದಾಖಲಿಸಿದೆ.

ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ  ಪ್ರಜಿತ್ ಕೆ.ಆರ್, ಸತೀಶನ್ ಕೆ, ಮಂಜುನಾಥ ವಿ, ನಸರುದ್ದೀನ್ ಎ.ಕೆ, ಚಾಲಕ ಕ್ರಿಸ್ಟಿ ಪಿ.ಎ ಎಂಬಿವರು  ಒಳಗೊಂಡಿದ್ದರು. ಬಂಧಿತ ಆರೋಪಿಗಳ ವಿರುದ್ಧ ಈ ಹಿಂದೆ  ಬೇರೆ ಪ್ರಕರಣಗಳು ಇದೆಯೆಂದು  ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page