107 ಕಿಲೋ ಗಾಂಜಾ ವಶ ಪ್ರಕರಣ: ಆರೋಪಿಯನ್ನು ಸೆರೆಹಿಡಿಯಲು ಹೋದ ಅಬಕಾರಿ ಅಧಿಕಾರಿಗಳಿಗೆ ಇರಿದು ಕೊಲೆಗೈಯ್ಯಲೆತ್ನ; ಬಂಧಿತ ಆರೋಪಿಗೆ ರಿಮಾಂಡ್
ಕುಂಬಳೆ: ಅಬಕಾರಿ ಅಧಿಕಾರಿಗ ಳಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ಅತೀ ಸಾಹಸದಿಂದ ಸೆರೆಹಿಡಿಯಲಾಗಿದೆ. ಬಂಬ್ರಾಣ ನಿವಾಸಿ ಅಬ್ದುಲ್ ಬಾಸಿತ್ (40) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಕಾಸರಗೋಡು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ.
ಕಳೆದ ವರ್ಷ ಅಬಕಾರಿ ಅಧಿಕಾ ರಿಗಳು ನಡೆಸಿದ ಕಾರ್ಯಾಚರಣೆ ಯೊಂದರಲ್ಲಿ 107 ಕಿಲೋ ಗಾಂಜಾ ವಶಪಡಿ ಲಾಗಿತ್ತು. ಈ ಪ್ರಕರಣದಲ್ಲಿ ಅಬ್ದುಲ್ ಬಾಸಿತ್ನನ್ನು ನಾಲ್ಕನೇ ಆರೋಪಿಯಾಗಿ ಕೇಸು ದಾಖಲಿಸ ಲಾಗಿತ್ತು. ಆದರೆ ಅನಂತರ ಆರೋಪಿ ತಲೆಮರೆಸಿಕೊಂಡಿದ್ದನು. ಈತ ನಿನ್ನೆ ಬಂಬ್ರಾಣಕ್ಕೆ ತಲುಪಿ ರುವುದಾಗಿ ಅಬಕಾರಿ ತಂಡಕ್ಕೆ ಮಾಹಿತಿ ಲಭಿಸಿತ್ತು. ಇದರಂತೆ ಆತನನ್ನು ಸೆರೆಹಿಡಿಯಲು ನಿನ್ನೆ ಮಧ್ಯಾಹ್ನ ವೇಳೆ ಅಬಕಾರಿ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಆರೋಪಿ ಅಬಕಾರಿ ತಂಡದ ಮೇಲೆ ಆಕ್ರಮಣ ನಡೆಸಿದ್ದಾನೆನ್ನಲಾಗಿದೆ. ಎಕ್ಸೈಸ್ ನಾರ್ಕೋಟಿಕ್ ಸ್ಕ್ವಾಡ್ನ ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಪ್ರಜಿತ್ ಕೆ.ಆರ್ ಹಾಗೂ ಸಿವಿಲ್ ಎಕ್ಸೈಸ್ ಆಫೀಸರ್ ರಾಜೇಶ್ ಪಿ ಎಂಬಿವರಿಗೆ ಆರೋಪಿ ಇರಿದು ಗಾಯಗೊಳಿಸಿ ದ್ದಾನೆ. ಗಾಯಗೊಂಡ ಈ ಇಬ್ಬರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಳಿಕ ಕುಂಬಳೆ ಪೊಲೀಸರ ಸಹಾಯದೊಂದಿಗೆ ಅಬ್ದುಲ್ ಬಾಸಿತ್ನನ್ನು ಸೆರೆಹಿಡಿಯಲಾಗಿದೆ.
ಈ ಘಟನೆಗೆ ಸಂಬಂಧಿಸಿ ಅಬಕಾರಿ ಅಧಿಕಾರಿ ಪ್ರಜಿತ್ ಕೆ.ಆರ್ ನೀಡಿದ ದೂರಿನಂತೆ ಅಬ್ದುಲ್ ಬಾಸಿತ್ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಬಂಧಿತ ಅಬ್ದುಲ್ ಬಾಸಿತ್ ಮೂರು ಇರಿತ ಪ್ರಕರಣಗಳಲ್ಲಿ ಆರೋಪಿ ಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.