ಬದಿಯಡ್ಕ-ವಿದ್ಯಾಗಿರಿ ರಸ್ತೆಯಲ್ಲಿ ಚರಂಡಿ ನಿರ್ಮಿಸಲು ಒತ್ತಾಯಿಸಿ ಕಾಂಗ್ರೆಸ್‌ನಿಂದ ಮನವಿ

ಬದಿಯಡ್ಕ: ಬದಿಯಡ್ಕ-ಬರ್ಲ-ವಿದ್ಯಾಗಿರಿ-ಮುನಿಯೂರು ರಸ್ತೆಯ ಮುಡಿಪಿನಡ್ಕ ಎಂಬಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು ಇದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ  ಈ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಇಂಡ್ಯನ್ ನೇಶನಲ್ ಕಾಂಗ್ರೆಸ್ (ಐ) ಬದಿಯಡ್ಕ ಮಂಡಲ ಸಮಿತಿ ಅಧಿಕಾರಿಗಳನ್ನು ಒತ್ತಾಯಿಸಿದೆ. ರಸ್ತೆ ಬದಿ ಸರಿಯಾದ  ಚರಂಡಿಯಿಲ್ಲ. ಹಲವು ಕಾಲದಿಂದ ಮಳೆ ನೀರು ಹರಿದು ಹೋಗುತ್ತಿದ್ದ  ಚರಂಡಿಗೆ ಖಾಸಗಿ ವ್ಯಕ್ತಿಯೋರ್ವ ಅಡಚಣೆ ಸೃಷ್ಟಿಸಿರು ವುದಾಗಿಯೂ ದೂರಲಾಗಿದೆ. ಇದರಿಂದ ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಬರುವ ಮಣ್ಣು ರಸ್ತೆಯಲ್ಲಿ ತುಂಬಿ ಕೊಳ್ಳುತ್ತಿದೆ. …

ಜೂನ್ 9ರಿಂದ ಟ್ರೋಲಿಂಗ್ ನಿಷೇಧ

ತಿರುವನಂತಪುರ: ಮಳೆಗಾಲ ಸಮುದ್ರದಲ್ಲಿ ಮೀನುಗಳ ಸಂತಾನೋ ತ್ಪತ್ತಿ ಋತುವಾಗಿರುವ ಹಿನ್ನೆಲೆಯಲ್ಲಿ ಅದನ್ನು ಸಂರಕ್ಷಿಸಲು ಪ್ರತೀ ವರ್ಷ ಏರ್ಪಡಿಸುವಂತೆ  ಈ ವರ್ಷವೂ ಜೂನ್ 9ರಿಂದ ಕೇರಳದ ವ್ಯಾಪ್ತಿಗೊಳ ಪಟ್ಟ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ (ಟ್ರೋಲಿಂಗ್)ಗೆ ನಿಷೇಧ ಹೇರಲಾಗು ವುದೆಂದು ಮೀನುಗಾರಿಕಾ ಸಚಿವ ಸಜಿ ಚೆರಿಯಾನ್ ತಿಳಿಸಿದ್ದಾರೆ. ಟ್ರೋಲಿಂಗ್ ನಿಷೇಧ ನಿಗದಿತ ಒಂದು ತಿಂಗಳ ತನಕ ಮುಂದುವರಿಯಲಿದೆ.  ಟ್ರೋಲಿಂಗ್ ನಿಷೇಧ ಹೇರಲಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸಮುದ್ರ ಕರಾವಳಿ ಹೊಂದಿರುವ ಜಿಲ್ಲೆಗಳಲ್ಲಿ 24 ತಾಸುಗಳ ತನಕವೂ  ಕಾರ್ಯವೆಸಗುವ ಕಂಟ್ರೋ ಲ್ …

ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ 31ರಂದು

ಕಾಸರಗೋಡು: ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಸಂಘದ ಸದಸ್ಯರ ಮಕ್ಕಳಾದ ವಿದ್ಯಾರ್ಥಿ ಗಳಿಗೆ ಕಲಿಕಾ ಸಾಮಗ್ರಿ ವಿತರಣೆ ಈ ತಿಂಗಳ 31ರಂದು ಬೆಳಿಗ್ಗೆ 11.30೦ಕ್ಕೆ ಸೀತಾಂಗೋಳಿ ಸಂತೋಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಕಚೇರಿ ಪರಿಸರದಲ್ಲಿ ನಡೆಯಲಿದೆ. ಪ್ರಾಥಮಿಕ ವಿಭಾಗ, ಪ್ರೌಢ ವಿಭಾಗ, ಪದವಿ ವಿಭಾಗ ಎಂಬ ಮೂರು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಗುತ್ತಿದೆ ಎಂದು ಸಂಬಂಧ ಪಟ್ಟವರು ತಿಳಿಸಿದ್ದು, ಸಂಘದ ಸದಸ್ಯರು ಭಾಗವಹಿಸ ಬೇಕೆಂದು ವಿನಂತಿಸಿದ್ದಾರೆ.

ಪರಿಸರಸ್ನೇಹಿ ಹಸಿರು ಸಂಸ್ಥೆಯಾಗಿ ಪೆರ್ಲ ಕುಟುಂಬ ಆರೋಗ್ಯ ಕೇಂದ್ರ ಆಯ್ಕೆ

ಪೆರ್ಲ: ಅತ್ಯುತ್ತಮ ಪರಿಸರ ಸ್ನೇಹಿ ಹಸಿರು ಸಂಸ್ಥೆಯಾಗಿ ಪೆರ್ಲ ಕುಟುಂಬ ಆರೋಗ್ಯ ಕೇಂದ್ರವನ್ನು ಆಯ್ಕೆ ಮಾಡ ಲಾಗಿದೆ. ನವಕೇರಳ ಕ್ರಿಯಾಯೋಜನೆ ಯಂಗವಾಗಿ ಸ್ವಚ್ಚತಾ ಮಿಷನ್ 2024-25ರ ಪಂಚಾಯತ್ ಮಟ್ಟದ ಪರಿಸರ ಸ್ನೇಹಿ ಸಂಸ್ಥೆಯಾಗಿ ಈ ಕೇಂದ್ರ ಆಯ್ಕೆಯಾಗಿದೆ. ಎಫ್‌ಎಚ್‌ಸಿ ಸಭಾಂಗಣದಲ್ಲಿ ನಡೆದ  ಅಭಿನಂದನಾ ಸಮಾರಂಭದಲ್ಲಿ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂರಿಂದ ಡಾ. ಲಕ್ಷ್ಮಿಪ್ರಿಯ ಈ ಬಗೆಗಿನ ಪ್ರಮಾಣಪತ್ರ, ಬಹುಮಾನ ಸ್ವೀಕರಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಅಧ್ಯಕ್ಷತೆ ವಹಿಸಿದರು. ಅಭಿವೃದ್ಧಿ …

ಬಿಜೆಪಿ ಕುಂಬಳೆ ಪಂ. ಸಮಿತಿ ಅಭ್ಯಾಸವರ್ಗ ಕಾರ್ಯಾಗಾರ

ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಇಲ್ಲಿನ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಅಭ್ಯಾಸವರ್ಗ ಕಾರ್ಯಾಗಾರ ನಡೆಯಿತು. ಬಿಜೆಪಿ ಕುಂಬಳೆ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಮಾಜಿ ಜಿಲ್ಲಾಧ್ಯಕ್ಷ ವಿ. ರವೀಂದ್ರನ್ ಉದ್ಘಾಟಿಸಿದರು. ಕಲ್ಲಿಕೋಟೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವಿ. ಸಜೀವನ್ ತರಬೇತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ರಾಜ್ಯ ಸಮಿತಿ ಮಾಜಿ ಸದಸ್ಯ ಕೋಳಾರ ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್, ಕುಂಬಳೆ ಮಂಡಲ …

ದೇಶದ ಅತ್ಯಂತ ಉದ್ದವಾದ ಮೂರನೇ ಭೂಗರ್ಭ ಮಾರ್ಗ ವಯನಾಡ್‌ನಲ್ಲಿ : ಕೇಂದ್ರದ ಅನುಮತಿ

ಕಲ್ಲಿಕೋಟೆ: ವಯನಾಡ್- ಕಲ್ಲಿಕೋಟೆ ಜಿಲ್ಲೆಗಳನ್ನು ಜೋಡಿಸುವ ಆನಕ್ಕಾಂಪೊಯಿಲ್- ಕಳ್ಳಾಡಿ- ಮೇಪಾಡಿ ಸುರಂಗ ಮಾರ್ಗವನ್ನು ವ್ಯವಸ್ಥೆಗಳನ್ನು ಪಾಲಿಸಿಕೊಂಡು ಜ್ಯಾರಿಗೊಳಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. 60 ಷರತ್ತು ಗಳೊಂದಿಗೆ ಕೇಂದ್ರ ನೈಸರ್ಗಿಕ ಸಚಿವಾಲಯದ ಅಧೀನದ ತಜ್ಞ ಸಮಿತಿ ಯೋಜನೆ ಜ್ಯಾರಿಗೊಳಿಸಲು ಶಿಫಾರಸು ನೀಡಿದೆ. ಮೇ 14, 15ರಂದು ಜರಗಿದ ಸಮಿತಿ ಸಭೆಯಲ್ಲಿ ಈ ತೀರ್ಮಾನ ಉಂಟಾಗಿದೆ. ಆದರೆ ವ್ಯವಸ್ಥೆಗಳು ಏನು ಎಂಬ ಬಗ್ಗೆ ಬಹಿರಂಗಗೊಂಡಿಲ್ಲ. ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಲು ಈ ತೀರ್ಮಾನ ದಿಂದ ರಾಜ್ಯ ಸರಕಾರಕ್ಕೆ ಸಾಧ್ಯವಾU ಲಿದೆ. …

ಕುಟುಂಬಶ್ರೀ ಕಲೋತ್ಸವ : ಕಾಸರಗೋಡಿಗೆ ದ್ವಿತೀಯ ಸ್ಥಾನ

ಕೋಟಯಂ: ಅರಂಙ್ ಎಂಬ ಹೆಸರಲ್ಲಿ ಕೋಟಯಂನಲ್ಲಿ ನಡೆದ ಕುಟುಂಬಶ್ರೀ ರಾಜ್ಯ ಕಲೋತ್ಸವದಲ್ಲಿ ಕಾಸರಗೋಡು ಜಿಲ್ಲೆಗೆ ದ್ವಿತೀಯ ಸ್ಥಾನ ಲಭಿಸಿದೆ. 217 ಅಂಕಗಳಿಸಿದ ಕಣ್ಣೂರು ಜಿಲ್ಲೆ ಚಾಂಪಿಯನ್ ಪಟ್ಟ ಅಲಂಕರಿಸಿ ದರೆ,197 ಅಂಕ ಪಡೆದ ಕಾಸರ ಗೋಡು ಜಿಲ್ಲೆಗೆ ದ್ವಿತೀಯ ಸ್ಥಾನದಲ್ಲಿ ತೃಪ್ತಿ ಪಡಬೇಕಾಗಿ ಬಂತು. 104 ಅಂಕದೊಂದಿಗೆ ತೃಶೂರು ಜಿಲ್ಲೆ 3ನೇ ಸ್ಥಾನ ಪಡೆದಿದೆ. ಸಮಾರೋಪ ಸಮಾರಂಭವನ್ನು ರಾಜ್ಯ ಸಭಾ ಸದಸ್ಯ ಜೋಸ್ ಕೆ. ಮಣಿ ಉದ್ಘಾಟಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಜಿಲ್ಲಾ ಪಂ. ಅಧ್ಯಕ್ಷೆ ಹೇಮಲತ …

ವಿ.ವಿ. ಕಂಪ್ಯೂಟರ್ ಅಸಿಸ್ಟೆಂಟ್ ಹುದ್ದೆಗೆ ಮಲೆಯಾಳ ಟೈಪ್‌ರೈಟಿಂಗ್ ಕಡ್ಡಾಯದಲ್ಲಿ ರಿಯಾಯಿತಿ: ಕನ್ನಡಿಗರಿಗೆ ಉಪಯುಕ್ತ

ಕಾಸರಗೋಡು: ಕೇರಳದ ವಿ.ವಿ.ಗಳಲ್ಲಿ ಖಾಲಿಯಿರುವ ಕಂಪ್ಯೂಟರ್ ಅಸಿಸ್ಟೆಂಟ್ ಹುದ್ದೆಗೆ ಟೈಪ್‌ರೈಟಿಂಗ್ ಮಲೆಯಾಳ ಲೋವರ್ ಕಡ್ಡಾಯವಾಗಿರಬೇಕೆಂಬ ಸರಕಾರದ ಆದೇಶದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ಇದು ಕಾಸರಗೋಡಿನ ಕನ್ನಡ ಉದ್ಯೋಗಾರ್ಥಿಗಳಿಗೆ ಸಹಾಯಕ ವಾಗಲಿದೆ. ಈ ಮೊದಲು ಕಾಸರಗೋಡಿನ ಕನ್ನಡಿಗರಿಗೆ ಪಿಎಸ್‌ಸಿ ಮೂಲಕ ಅರ್ಜಿ ಸಲ್ಲಿಸಲು ಟೈಪ್‌ರೈಟಿಂಗ್ ಮಲೆಯಾಳ ತಿಳಿದಿರಬೇಕೆಂಬ ಆದೇಶದಿಂದ ಸಮಸ್ಯೆ ಯಾಗುತ್ತಿತ್ತು. ಅದನ್ನು ಪರಿಹರಿಸಲು ಕಾಸರಗೋಡಿನಲ್ಲಿರುವ ಶಿಕ್ಷಣ ಉದ್ಯೋಗ ಮಾಹಿತಿ ಕೇಂದ್ರದ ನಿರ್ದೇಶಕ ಗಣೇಶ್ ಪ್ರಸಾದ್ ಪಾಣೂರು, ಉದ್ಯೋಗಾರ್ಥಿಯಾದ ಪುನೀತ್ ಕೃಷ್ಣ  ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಸಚಿವರಿಗೆ …

ಪೋಕ್ಸೋ ಪ್ರಕರಣ: ಆರೋಪಿಗೆ ಆರು ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಪ್ರಾಯಪೂರ್ತಿ ಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯ ವಿವಿಧ ಸೆಕ್ಷನ್‌ಗಳ ಪ್ರಕಾರ ಆರು ವರ್ಷ ಸಜೆ ಹಾಗೂ 16,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಬೇಡಡ್ಕ ಎರಿಞ್ಞಿಪುಳ ಕಡಯಂ ಪೊಲಿಯಂಕುನ್ನಿನ ಕೆ. ಪ್ರಶಾಂತ್ (33) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 9 ತಿಂಗಳು ಮತ್ತು 9 ದಿನ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.  ಹೆತ್ತವರ ಜತೆಗೆ ವಾಸಿಸುತ್ತಿರುವ ೧೫ …

ಚನ್ನಿಕೋಡಿಯಲ್ಲಿ ಗುಡ್ಡೆ ಕುಸಿತ: ಮನೆ ಮಂದಿ ಭೀತಿಯಲ್ಲಿ

ಸೀತಾಂಗೋಳಿ: ಪುತ್ತಿಗೆ ಪಂಚಾಯತ್‌ನ 1ನೇ ವಾರ್ಡ್ ಚನ್ನಿಕೋಡಿ ಎಂಬಲ್ಲಿ ಡೆನಿಸ್ ಜೋಸೆಫ್ ಎಂಬವರ ಮನೆ ಸಮೀಪದಲ್ಲಿ ಗುಡ್ಡೆ ಕುಸಿದು ನೀರು ಸಂಗ್ರಹಗೊಂಡಿದೆ. ಮಳೆ ಬಿರುಸಾಗಿ ಮುಂದುವರಿದರೆ ಇಲ್ಲಿನ ತೋಟ ಪೂರ್ತಿಯಾಗಿ ಮುಳುಗುವ ಸಾಧ್ಯತೆ ಇದ್ದು, ಮನೆ ಮಂದಿ ಆತಂಕಿತರಾಗಿದ್ದಾರೆ. ಪುತ್ತಿಗೆ ಪಂಚಾಯತ್ ತಂಡ ನಿನ್ನೆ ಸಂಜೆ ಈ ಪ್ರದೇಶಕ್ಕೆ ಭೇಟಿ ನೀಡಿದೆ. ಪಂಚಾಯತ್ ಕಾರ್ಯದರ್ಶಿ ನಾರಾಯಣ ನಾಯ್ಕ್, ಸಹಾಯಕ ಕಾರ್ಯದರ್ಶಿ ಮನೋಜ್ ಮುಕುಂದನ್, ಎನ್‌ಆರ್‌ಜಿ ಇಂಜಿನಿಯರ್ ಪ್ರಜ್ವಲ್, ಸಂದೇಶ್, ಪಂ. ಸದಸ್ಯ ಗಂಗಾಧರ ತಂಡದಲ್ಲಿದ್ದರು.